ಚಿತ್ರದುರ್ಗ:ರಾಜ್ಯದ ಅಭಿವೃದ್ಧಿ ಪರ್ವ ಮುಂದುವರೆಯಲು ಬಿಜೆಪಿ ಪಕ್ಷಕ್ಕೆ ಮತ ನೀಡಿದರೆ ಮಾತ್ರ ಎಲ್ಲಾ ವರ್ಗದ ಅಭಿವೃದ್ಧಿ ಆಗಲು ಸಾಧ್ಯ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಬುದ್ದನಗರ, ಟೀಚರ್ಸ್ ಕಾಲೋನಿ, ಸೂರ್ಯಪುತ್ರ ಸರ್ಕಲ್, ಐಯುಡಿಪಿ, ಗಾಂಧಿನಗರ, ಸಾಧಿಕ್ ನಗರದಲ್ಲಿ ಚುನಾವಣಾ ಪ್ರಚಾರ ನಡೆಸಿ ಮತಯಾಚನೆ ಮಾಡಿ ಮಾತನಾಡಿದರು.
ದೇಶ ಮತ್ತು ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಕಳೆದ ಮೂರುವರೆ ವರ್ಷದಲ್ಲಿ ಜನರ ನಿರೀಕ್ಷೆ ಮೀರಿ ಚಿತ್ರದುರ್ಗ ಅಭಿವೃದ್ಧಿ ಮಾಡಲಾಗಿದೆ. ಚಿತ್ರದುರ್ಗ ಅಭಿವೃದ್ಧಿ ನೋಡಿ ಸಹಿಸಲಾಗದೇ ನಮ್ಮ ವಿರೋಧಿಗಳು ಮಾತಡುತ್ತಿದ್ದು ನಾನು ಜನರ ನಿರೀಕ್ಷೆಯಂತೆ ಅಭಿವೃದ್ಧಿ ಮಾಡಿದ್ದೇನೆ. ಅಭಿವೃದ್ಧಿ ಆಗಿಲ್ಲ ಎಂದು ಹೇಳುವ ನಮ್ಮ ವಿರೋಧ ಪಕ್ಷದವರು ಸಿ.ಸಿ.ರಸ್ತೆ,ಶಾಲೆಗಳ ಕಟ್ಟಡ ನಿರ್ಮಾಣ, ಚಕ್ ಡ್ಯಾಂ ನಿರ್ಮಾಣ, ರಸ್ತೆ ಅಗಲೀಕರಣ, ವಿ.ವಿ.ಸಾಗರ ನೀರು ಕುಡಿಯುವ ನೀರು ಸರಬರಾಜು ಮಾಡಲು 583 ಕೋಟಿ ಹಣ, 3600 ಕ್ಕೂ ಹೆಚ್ಚು ಮನೆಗಳು ತಂದಿರುವುದು ಅಭಿವೃದ್ಧಿ ಅಲ್ಲವೇ ಎಂದು ಪ್ರಶ್ನಿಸಿದರು. ಗ್ರಾಮೀಣ ಮತ್ತು ನಗರದಲ್ಲಿ ಎಲ್ಲಾ ಮಣ್ಣು ಮುಕ್ತ ರಸ್ತೆಯಾಗಿಸಿ ಸಿ.ಸಿ.ರಸ್ತೆ ನಿರ್ಮಾಣ ಮಾಡಿದ್ದೇನೆ ಎಂದರು.
ಜನರ ಜೊತೆಗೆ ಇದ್ದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದೇನೆ. ಜನರು ಹೇಳಿದ ಕೆಲಸವನ್ನು ಎಲ್ಲಾ ಮಾಡಿದ್ದು ನಾನು ಕೊಟ್ಟ ಮಾತು ತಪ್ಪಿಲ್ಲ. ಬಡವರ ಕೆಲಸವನ್ನು ಕಳೆದ ಮೂವತ್ತು ವರ್ಷಗಳಿಂದ ಮಾಡಿದ್ದೇನೆ. ಈಗ ಬಂದು ಏನೋ ಹೇಳಿದರೆ ಜನರ ನಂಬಲು ಸಾಧ್ಯವಿಲ್ಲ. ನಮ್ಮ ಮತದಾರರು ಬುದ್ದಿವಂತರಿದ್ದು ಮೋದಿ ಅವರ ನಾಯಕತ್ವ ಮತ್ತು ಯಡಿಯೂರಪ್ಪ , ಬೊಮ್ಮಾಯಿ ಅವರ ಆಡಳಿತ ಹಾಗೂ ಚಿತ್ರದುರ್ಗ ಅಭಿವೃದ್ಧಿ ಮೆಚ್ಚಿ ಜನ ಮತ ನೀಡಿ ಅತ್ಯಧಿಕ ಮತಗಳಿಂದ ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶ್ರೀನಿವಾಸ್, ರವಿಕುಮಾರ್, ಪ್ರಕಾಶ್ ಮತ್ತು ಮುಖಂಡರು ಭಾಗವಹಿಸಿದ್ದರು.
+ There are no comments
Add yours