ದಾವಣಗೆರೆ:ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯ ಚಿಕ್ಕಬಿದರಿ ಗ್ರಾಮದಲ್ಲಿ ಅಡಿಕೆ ತೋಟವೊಂದರಲ್ಲಿ ಯಾರೋ ದುಷ್ಕರ್ಮಿಗಳು ರಾತ್ರಿ ಸಮಯದಲ್ಲಿ 300 ಅಡಿಕೆ ಗಿಡಗಳನ್ನು ಕಡಿದು ಹಾಕಿರುವ ಘಟನೆ ನಡೆದಿದೆ.
ಈ ಬಗ್ಗೆ 112ಕ್ಕೆ ದೂರು ಬಂದಿದ್ದು, 112 ERV ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಲಾಗಿ ಸುಮಾರು 300 ಅಡಿಕೆ ಗಿಡಗಳನ್ನು ಯಾರೋ ವ್ಯಕ್ತಿಗಳು ಕಡಿದಿರುವುದು ಕಂಡು ಬಂದಿದೆ. ದೂರುದಾರರಿಗೆ ಹರಿಹರ (ಗ್ರಾ) ಠಾಣೆಗೆ ತೆರಳಿ ದೂರು ನೀಡಲು ತಿಳಿಸಲಾಗಿದೆ ಮತ್ತು ಈ ಮಾಹಿತಿಯನ್ನು ಹರಿಹರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿಗಳಿಗೆ ತಿಳಿಸಿದೆ ಎಂದು ತಿಳಿದಿದು ಬಂದಿದೆ.
[t4b-ticker]
+ There are no comments
Add yours