ಪ್ರತಿಯೊಂದು ಕುಟುಂಬಕ್ಕೂ‌ ಮಕ್ಕಳ‌ ಅವಶ್ಯಕತೆ ಇದೆ: ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ-24  ಪ್ರತಿಯೊಂದು ಕುಟುಂಬಕ್ಕೂ‌ ಮಕ್ಕಳ‌ ಅವಶ್ಯಕತೆ ಇದೆ. ಕೆಲವೊಂದು‌ ನ್ಯೂನತೆಯಿಂದ ಮಕ್ಕಳನ್ನು ಪಡೆಯಲಾಗದವರು ಇಂದು ನಡೆದ‌ ಶಿಬಿರದಲ್ಲಿ ಭಾಗವಹಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳಿಲ್ಲದ ದಂಪತಿಗಳಿಗೆ ಬಂಜೆತನ ನಿವಾರಣೆ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಭಾಗ್ಯ ಪ್ರತಿಯೊಂದು ಕುಟುಂಬಕ್ಕೂ ಅನಿವಾರ್ಯವಾಗಿರುತ್ತದೆ ಅಂತಹ ಸಮಯದಲ್ಲಿ ಮಕ್ಕಳ ಪಡೆಯಬೇಕಾದವರು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಶಸ್ತಚಿಕಿತ್ಸಕರ ಸಹಯೋಗದೊಂದಿಗೆ ಹಲವಾರು ಉಚಿತ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಅದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಕಾಶಿ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯ ಡಾ. ವೆಂಕಟೇಶ್,ಸಾಗರ್ ಆಸ್ಪತ್ರೆಯ ಡಾ. ರಶ್ಮಿ, ನಗರಸಭಾ ಅಧ್ಯಕ್ಷೆ ಸುಮಕ್ಕ ಆಂಜನೇಯ, ಉಪಾಧ್ಯಕ್ಷೆ ಮಂಜುಳಾ ಆರ್ ಪ್ರಸನ್ನ ಕುಮಾರ್ ನಗರಸಭಾ ಸದಸ್ಯರಾದ ಸುಮಾ, ಜೈ ತುಂಬಿ ಮಾಲಿಕ್ ಸಾಬ್ ಮತ್ತು ಮುಖಂಡರುಗಳು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours