ಬೆಂಗಳೂರು,ಆ:24 ದೇವರನ್ನು ಪೂಜಿಸು ದೇವರನ್ನು ಪೂಜಿಸುವವರನ್ನಲ್ಲ. ದೇವರನ್ನು ಆರಾಧಿಸು ಪೂಜಾರಿಯನ್ನಲ್ಲ. ದೇವರ ಹೆಸರನ್ನು ಬಳಸಿಕೊಂಡು ಭಕ್ತಿಯನ್ನೇ ಬಂಡವಾಳ ಮಾಡಿ ಯುಕ್ತಿಯಿಂದ ಹಣವನ್ನ ಮಾತ್ರವಲ್ಲದೇ ಮಾನವನ್ನು ದೋಚುವ ಖದೀಮರಿದ್ದಾರೆ. ಸ್ವಾಮೀಜಿ ಎಂದು ಹೇಳಿ ದೋಷ ಪರಿಹಾರಕ್ಕೆ ಮನೆಗೆ ಕರೆಸಿಕೊಂಡು ಆತ್ಯಾಚಾರ ಎಸಗಿದ್ದಾನೆ ಎಂದು ಕೆಆರ್ಪುರ ಪೊಲೀಸರಿಗೆ ಸಂತ್ರಸ್ತ ಯುವತಿ ದೂರು ದಾಖಲಿಸಿದ್ದಾರೆ.
ಯುವತಿಗಿದ್ದ ದೈವಭಕ್ತಿಯನ್ನೇ ದುರ್ಬಳಕೆ ಮಾಡಿಕೊಂಡು ದೋಷವಿರುವುದಾಗಿ ಸುಳ್ಳು ಹೇಳಿ ಪೂಜೆ ನೆಪದಲ್ಲಿ ತನ್ನ ಮನೆಗೆ ಕರೆಯಿಸಿ ಮತ್ತುಬರುವ ಔಷಧಿ ನೀಡಿ ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ಆತ್ಯಾಚಾರ ಎಸಗಿರುವ ಕಳವಳಕಾರಿ ಸಂಗತಿ ನಗರದಲ್ಲಿ ಬೆಳಕಿಗೆ ಬಂದಿದೆ. ವಿಚಿತ್ರವೆಂದರೆ ನಕಲಿ ಸ್ವಾಮೀಜಿಯ ಹೀನ ಕೃತ್ಯಕ್ಕೆ ಪತ್ನಿಯೇ ಸಾಥ್ ನೀಡಿರುವುದು ಬೆಳಕಿಗೆ ಬಂದಿದೆ.
ಮನನೊಂದಿದ್ದ ಯವತಿಗೆ ದೋಷ ಪರಿಹರಿಸುವ ನೆಪದಲ್ಲಿ ಮಾಡಿದ ಮಹಾ ಮೋಸಕ್ಕೆ ಸಂತ್ರಸ್ತೆ ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನ ಮೇರೆಗೆ ಆನಂದಮೂರ್ತಿ ಹಾಗೂ ಪತ್ನಿ ಲತಾ ವಿರುದ್ಧ ಅತ್ಯಾಚಾರ, ಜೀವಬೆದರಿಕೆ ಹಾಗೂ ವಂಚನೆ ಪ್ರಕರಣ ದಾಖಲಿಸಿಕೊಂಡು ಕೆಆರ್ ಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
[t4b-ticker]
+ There are no comments
Add yours