ಚಳ್ಳಕೆರೆ: ನಗರದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಸುರಿದ ಆನೆಕಲ್ಲು ಮಳೆಗೆ ನಗರದ ಶಾಂತಿನಗರ ಹಾಗೂ ರಹೀಮ್ ನಗರದಲ್ಲಿ ಅಂದಾಜು 30 ಮನೆಗಳಿಗೆ ಸಾರ್ವಜನಿಕ ರಸ್ತೆಯ ನುಗ್ಗಿ ಮನೆಗಳ ತುಂಬಿದ್ದು ಸ್ಥಳಕ್ಕೆ ತಹಶೀಲ್ದಾರ್ ಎನ್.ರಘುಮೂರ್ತಿ ಪರಿಶೀಲಿಸಿದರು.
ಮನೆಗಳ ಬಳಿಯಲ್ಲಿ ಮೂರು ಅಡಿ ನೀರು ನಿಂತಿದ್ದು ರಾತ್ರಿ ಹತ್ತು ಗಂಟೆಯ ಸುಮಾರಿಗೆ ಮನೆಗಳಿಗೆ ಭೇಟಿ ನೀಡಿ ಹಿನ್ನೀರನ್ನು ಹೊರಗಡೆ ತೆಗೆಸಲಾಯಿತು. ಸಾರ್ವಜನಿಕರೊಂದಿಗೆ ಈ ರೀತಿ ವ್ಯತ್ಯಯವಾಗದ ರೀತಿಯಲ್ಲಿ ವೈಜ್ಞಾನಿಕವಾಗಿ ಕ್ರಮಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು. ಈ ಸಮಸ್ಯೆಯನ್ನು ಶಾಸಕರೊಂದಿಗೆ ಚರ್ಚಿಸಿ ನಾಳೆ 9:00 ಗಂಟೆಯಿಂದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಈ ಘಟನಾ ಸ್ಥಳಕ್ಕೆ ಭೇಟಿ ನೀಡಿ ಎಲ್ಲೆಲ್ಲಿ ರಾಜಕಾಲುವೆ ಮತ್ತಿತರ ಸ್ವತ್ತನ್ನು ಅತಿಕ್ರಮಿಸಿರುವ ಬಗ್ಗೆ ಪರಿಶೀಲಿಸಲಾಗುವುದು ಹೇಳಿದರುಈ ಸಂದರ್ಭದಲ್ಲಿ ಎಂಟನೇ ವಾರ್ಡಿನ ನಗರಸಭಾ ಸದಸ್ಯರಾದ ಸುಜಾತ ಪ್ರಹಲ್ಲಾದ್ ಉಪಸ್ಥಿತರಿದ್ದರು.
[t4b-ticker]
+ There are no comments
Add yours