ಚಿತ್ರದುರ್ಗ: ಚಿತ್ರದುರ್ಗ ನಗರದ ಶ್ರೀ ಅಹೋಬಲ ಟಿವಿಎಸ್ ಕಂಪನಿಯ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ಚಳ್ಳಕೆರೆ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ಅವರಿಂದ ಕೇಕ್ ಕಟ್ ಮಾಡಿಸುವ ಮೂಲಕ ಸಂಭ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಜಿಲ್ಲಾ ಕೇಂದ್ರ ಚಿತ್ರದುರ್ಗದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಜನವರಿ 21 ರಂದು ಆರಂಭವಾದ ಶ್ರೀ ಅಹೋಬಲ ಟಿವಿಎಸ್ ಸಾಕಷ್ಟು ಯಶಸ್ಸು ಸಾಧಿಸಿ ಮತ್ತು ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಯಶಸ್ವಿಯಾಗಿ ಸಂಪೂರ್ಣ ಎರಡು ವರ್ಷ ಪೂರೈಸಿರುವುದು ತುಂಬಾ ಸಂತೋಷವಾಗಿದೆ ಎಂದರು.
ಒಂದು ಉದ್ಯಮ ಆರಂಭಿಸುವುದು ಸುಲಭವಲ್ಲ, ಆದರೆ ಉದ್ಯಮ ಆರಂಭಿಸಿದ ಮೇಲೆ ಸಾಕಷ್ಟು ಏಳುಬೀಳುಗಳನ್ನು ಅನುಭವಿಸಿ ಯಶಸ್ವಿ ಸಾಧಿಸುವುದು ದೊಡ್ಡ ಸವಾಲಿನ ಕೆಲಸ ಅಂತಹ ಎಲ್ಲಾ ಬೆಳವಣಿಗೆಗಳು ಮತ್ತು ಪೈಪೋಟಿ ಎದುರಿಸುವ ಮೂಲಕ ನಮ್ಮ ಹುಡುಗ ಟಿವಿಎಸ್ ಮಾಲೀಕ ಅರಣ್ ಕುಮಾರ್ ಯಶಸ್ಸು ಸಾಧಿಸಿದ್ದು ಯುವ ಸಮೂಹಕ್ಕೆ ಪ್ರೇರಣೆಯಾಗಿದ್ದಾರೆ.
ಗ್ರಾಮೀಣ ಭಾಗದಿಂದ ಬಂದ ನನ್ನ ಕ್ಷೇತ್ರದ ಯುವಕ ಒಂದು ಉದ್ಯಮ ಆರಂಭಿಸಿ ಸಾವಿರಾರು ಗ್ರಾಹಕರ ಮನಗೆದ್ದು ಜನರ ವಿಶ್ವಾಸ ಪಡೆದಿದ್ದಾರೆ. ಇಂತಹ ನೂರಾರು ಸಂಭ್ರಮಗಳನ್ನು ಶ್ರೀ ಅಹೋಬಲ ಟಿವಿಎಸ್ ಪೂರೈಸಲಿ ಎಂದು ಶುಭ ಹಾರೈಸಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ಶ್ರೀ ಅಹೋಬಲ ಟಿವಿಎಸ್ ಚಿತ್ರದುರ್ಗ ಜಿಲ್ಲೆಯ ದ್ವಿಚಕ್ರ ವಾಹನ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಎರಡು ವರ್ಷ ಪೂರೈಸಿರುವ ಟಿವಿಎಸ್ ಶೋ ರೂಂಗೆ ಮತ್ತಷ್ಟು ಜನಪ್ರಿಯತೆ ಮತ್ತು ಹೆಚ್ಚಿನ ಗ್ರಾಹಕರು ವಾಹನಗಳು ಖರೀದಿಸಲಿ ಎಂದು ಶುಭ ಹಾರೈಸಿದರು.
ಇದನ್ನೂ ಓದಿ: ಜನವರಿ 23ರಂದು ವಿದ್ಯುತ್ ವ್ಯತ್ಯಯ
ಕರ್ನಾಟಕ ಸರ್ಕಾರದ ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ, ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಆಕಾಂಕ್ಷಿ ವಿನಯ ತಿಮ್ಮಾಪುರ, ಮಾಜಿ ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್, ಮುಖಂಡರಾದ ರಘು, ತಕ್ಕಡಿ ಸುರೇಶ್, ಉಪಾಧ್ಯ ಹೋಟೆಲ್ ದೀಪನಾಂದ್ ಸೇರಿ ಹಲವು ಗಣ್ಯರು ಆಗಮಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಶ್ರೀ ಅಹೋಬಲ ಟಿವಿಎಸ್ ಮಾಲೀಕ ಪಿ.ವಿ.ಅರುಣ್ ಕುಮಾರ್, ಶ್ರೀ ಅಹೋಬಲ ಸ್ಟೀಲ್ ಅಂಡ್ ಸಿಮೆಂಟ್ ಉದ್ಯಮದ ಮಂಜುಳ, ಸರ್ವಿಸ್ ಮ್ಯಾನೇಜರ್ ಯಾಸಿರ್, ವಿದ್ಯಾದರ್, ಸೇಲ್ಸ್ ಮ್ಯಾನೇಜರ್ ರವಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.
[t4b-ticker]
+ There are no comments
Add yours