ಬೆಂಗಳೂರು: ಬಿಜೆಪಿ ಮುಖಂಡ ಸಿದ್ದೇಶ್ ಯಾದವ್ ಸುಮಾರು (49 ) ವರ್ಷ ಇವರು ಹೃದಯಾಘಾತದಿಂದ ಕೊನೆಯುಸಿರೆಳೆದರು.
ಇಂದು ಬಿಜೆಪಿ ಪಕ್ಷದ ಕಚೇರಿಯ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಎದೆಯ ನೋವು ಕಾಣಿಸಿಕೊಂಡಿದ್ದು ಬೆಂಗಳೂರು ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ಎಂದು ಸಭೆಯಿಂದ ತೆರಳಿದರು, ಆಸ್ಪತ್ರೆ ತಲುಪವಷ್ಟ್ಟರಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವರು ಬಿಜೆಪಿ ಮುಖಂಡ ಓಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಹಾಗೂ ಬಳ್ಳಾರಿ ವಿಭಾಗದ ಪ್ರಭಾರಿಗಳು ಸಹ ಆಗಿದ್ದರು.
ಮೂಲತಃ ಹಿರಿಯೂರು ತಾಲೂಕು ಬಸಪ್ಪನ ಮಾಳಿಗೆ ಗ್ರಾಮದವರಾದ ಇವರು ಚಿತ್ರದುರ್ಗ ನಗರದ ಟಿಚರ್ಸ್ ಕಾಲೋನಿಯಲ್ಲಿ ವಾಸವಿರುತ್ತಾರೆ. ಇವರು ಸಂಘ ಪರಿವಾರ , ಎಬಿವಿಪಿ ಕಾರ್ಯಕರ್ತರಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿರುತ್ತಾರೆ.
2013 ರಲ್ಲಿ ಹಿರಿಯೂರು ವಿಧಾನ ಸಭಾ ಕ್ಷೇತ್ರದಿಂದ ಸ್ವರ್ಧೆ ಮಾಡಿ ಪರಾಭವಗೊಂಡಿದ್ದರು.
[t4b-ticker]
+ There are no comments
Add yours