ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಕಾಂಗ್ರೆಸ್ ಸಮಬಲದ ಹೋರಟ, ಸೋತು ಸೊರಗಿದ ಜೆಡಿಎಸ್.

 

ವಿಧಾನ ಪರಿಷತ್ ಚುನಾವಣೆಯಲ್ಲಿ    ಗೆದ್ದ ಅಭ್ಯರ್ಥಿಗಳಾದ ಬಸವರಾಜ ಹೊರಟ್ಟಿ, ಮಧು ಮಾದೇಗೌಡ, ಪ್ರಕಾಶ್‌ ಹುಕ್ಕೇರಿ, ಹಣುಮಂತ ನಿರಾಣಿ ಗೆಲುವು ಸಾಧಿಸಿದ್ದಾರೆ.

ಬೆಂಗಳೂರು: ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯ  ಫಲಿತಾಂಶ  ಪ್ರಕಟವಾಗಿದ್ದು  ಬಿಜೆಪಿ ಎರಡು  ಮತ್ತು ಕಾಂಗ್ರೆಸ್‌ ಎರಡು  ಸ್ಥಾನಗಳಲ್ಲಿ ಗೆಲುವ ಕಂಡಿದ್ದು ಜೆಡಿಎಸ್‌ ಪಕ್ಷ ಸೊನ್ನೆ ಸುತ್ತಿದೆ.

ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಸವರಾಜ ಹೊರಟ್ಟಿ ಅವರು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ತೊರೆದು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಸವರಾಜ ಹೊರಟ್ಟಿ ಎಂಟನೇ ಬಾರಿ ವಿಜಯ ಸಾಧಿಸಿ ದಾಖಲೆ ಬರೆಯುವ ಮೂಲಕ ಇತಿಹಾಸ ಬರೆದಿದ್ದಾರೆ.

ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಕಣಕ್ಕೆ ಇಳಿಸಿತ್ತು ಅದರಂತೆ  ಪ್ರಕಾಶ್ ಹುಕ್ಕೇರಿ ಜಯ ಗಳಿಸಿದ್ದಾರೆ. ಈ ಹಿಂದೆ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಬಿಜೆಪಿಯ ಅರುಣ ಶಹಾಪುರ ಸೋಲುಂಡಿದ್ದಾರೆ.

ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಹಣಮಂತ ನಿರಾಣಿ ಜಯ ಗಳಿಸಿದ್ದಾರೆ. ಅವರು 34,693 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದರು. ಅವರು ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸುನೀಲ ಸಂಕ ಅವರನ್ನು ಸೋಲಿಸುವ ಮೂಲಕ ವಿಜಯಮಾಲೆ ಅಲಂಕರಿಸಿದ್ದಾರೆ..

[t4b-ticker]

You May Also Like

More From Author

+ There are no comments

Add yours