ತುಮಕೂರು ಜಿಲ್ಲೆಗೆ ಎಂಟ್ರಿಯಾದ ಭಾರತ್ ಜೋಡೋ ಯಾತ್ರೆ

 

ತುಮಕೂರು: ಅ:8 : ದೇಶದ ಸಾಮಾಜಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕನ್ಯಾಕುಮಾರಿಯಿಂದ ಜಮ್ಮುವರೆಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ ತುಮಕೂರು ಜಿಲ್ಲೆಗೆ ಆಗಮಿಸಿದ್ದು ಕೆಪಿಸಿಸಿ ಮಾಜಿ ಅಧ್ಯಕ್ಷ ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಯಾತ್ರೆಯನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

ರಾಹುಲ್ ನೇತೃತ್ವದ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಹಲವು ಮಂದಿ ಯುವಕರು ಹೆಜ್ಜೆಹಾಕಿ ಸಾಥ್ ನೀಡಿದರು. ಅದರಲ್ಲಿ ಶಿಡ್ಲಘಟ್ಟದ ಯುವಕ ತನ್ನ ಕೊರಳ ತುಂಬ ಪದಕಗಳನ್ನು ಹಾಕಿಕೊಂಡು ರಾಹುಲ್ ಗಾಂಧಿ ಜೊತೆ ನಡೆದರು ಸಂಭ್ರಮಪಟ್ಟರು.

 

ಯಾತ್ರೆಯಲ್ಲಿ ದಲಿತ ಮುಖಂಡರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವತಿಯರು ಪಾಲ್ಗೊಂಡಿದ್ದಾರೆ. ಯಾತ್ರೆಗೆ ಜನಸಾಗರ ಸೇರುತ್ತಿದ್ದು ಕಾಂಗ್ರೆಸ್ ಮುಖಂಡರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours