ಬಿ.ಫರೀದ್ ಖಾನ್(ಭಾಷ)ಗೆ ಅಲ್ಪಸಂಖ್ಯಾತ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ

 

ಚಳ್ಳಕೆರೆ-15 ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನಗರದ ಸುರಕ್ಷ ಪಾಲಿಕ್ಲಿನಿಕ್ ಮಾಲೀಕ, ಸಮಾಜ ಸೇವಕ ಬಿ. ಫರೀದ್ ಖಾನ್(ಭಾಷ) ರವರನ್ನು ನೇಮಕ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷ, ಮಾಜಿ ಎಂಎಲ್ ಸಿ ಕೆ.ಅಬ್ದುಲ್ ಜಬ್ಬಾರ್ ಸಾಬ್ ತಿಳಿಸಿದ್ದಾರೆ.

ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ, ಚಳ್ಳಕೆರೆ ನಗರವೂ ಸೇರಿದಂತೆ ಹಲವಾರು ಕಡೆಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಅಲ್ಪಸಂಖ್ಯಾತ ಘಟಕ ಸಂಘಟನೆ ಮಾಡುವಲ್ಲಿ ಉತ್ತಮ ಕಾರ್ಯ ನಿಬಾಯಿಸಿದ್ದಾರೆ. ಕಳೆದ ಭಾರಿಯ ಆರೋಗ್ಯ ಸುರಕ್ಷಾ ಸಮಿತಿ ಸದಸ್ಯರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಕೀರ್ತಿ ಇವರದ್ದು. ಅದಲ್ಲದೆ ಹಲವಾರು ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಬಡವರ, ನಿರ್ಗತಿಕ ಆರೋಗ್ಯ ರಕ್ಷಣೆಗೂ ಶ್ರಮಿಸಿದ್ದಾರೆ.‌ ಇವರ ಕಾರ್ಯಮತ್ತಷ್ಟು ಪಕ್ಷಕ್ಜೆ ದೊರೆಯಬೇಕು ಎಂದು ಸೂಚಿಸಿದರು.
ನೂತನ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ. ಫರೀದ್ ಖಾನ್(ಭಾಷ) ಆದೇಶ ಪ್ರತಿ ಸ್ವೀಕರಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷವೂ ನನ್ನ ಮೇಲೆ ಭರವಸೆ ಇಟ್ಟು ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದು ಈ ಹುದ್ದೆಯನ್ನು ಪ್ರಾಮಾಣಿಕವಾಗಿ ನಿಬಾಯಿಸುವೆ. ರಾಜ್ಯದ ಪ್ರತಿ ಮೂಲೆ ಮೂಲೆಗೂ ಸಂಚರಿಸಿ ಪಕ್ಷವನ್ನು ಸಂಘಟಿಸುವೆ ಎಂದು ಭರವಸೆ ನೀಡಿದರು.

[t4b-ticker]

You May Also Like

More From Author

+ There are no comments

Add yours