ಚಿತ್ರದುರ್ಗ(ಕರ್ನಾಟಕ ವಾರ್ತೆ)ಜನವರಿ07:
2019-20 ನೇ ಸಾಲಿನ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ಹಾಗೂ ವಿಶೇಷ ಕೇಂದ್ರಿಯ ನೆರವಿನಡಿ ಪರಿಶಿಷ್ಟ ಪಂಗಡದವರಿಗೆ ಸಣ್ಣ ಪ್ರಮಾಣದ ಸರಕು ಸಾಗಣಿಕೆ ವಾಹನ ಖರೀದಿಸಲು ಅರ್ಜಿ ಆಹ್ವಾನಿಸಲಾಗಿದೆ. ಜನವರಿ 17 ಅರ್ಜಿ ಸಲ್ಲಿಸಲು ಕೊನೆಯ ದಿನ
ಜಿಲ್ಲೆಗೆ ನಿಗಧಿಪಡಿಸಿರುವ 15 ಭೌತಿಕ ಗುರಿಯಲ್ಲಿ 13 ಫಲಾನುಭವಿಗಳಿಗೆ ಸರಕು ಸಾಗಣಿಕೆ ವಾಹನ ನೀಡಲಾಗಿದ್ದು. ಇನ್ನು 02 ಫಲಾನುಭವಿಗಳು ಸದುಪಯೋಗ ಪಡೆಯಲು ಆಸಕ್ತಿ ತೋರದಿರುವ ಕಾರಣ ಮೊಳಕಾಲ್ಮೂರು ತಾಲ್ಲೂಕಿನ 02 ಸರಕು ವಾಹನಗಳ ಘಟಕಗಳು ಉಳಿಕೆಯಾಗಿದ್ದು, ಕಾರ್ಯಕ್ರಮವನ್ನು ಸಂಪೂರ್ಣವಾಗಿ ಅನುಷ್ಠಗೊಳಿಸಲು ಸರಕು ಸಾಗಣಿಕೆ ವಾಹನ ಖರೀದಿಸಲು ಇಲಾಖೆಯಿಂದ ಶೇ.50 ಸಹಾಯಧನ ಮತ್ತು ಶೇ.50 ಬ್ಯಾಂಕ್ ಲೋನ್ ಭರಿಸಬೇಕಾಗಿದ್ದು, ಮೊಳಕಾಲ್ಮೂರು ತಾಲ್ಲೂಕಿಗೆ ಸಣ್ಣ ಪ್ರಮಾಣದ ಸರಕು ಸಾಗಣಿಕೆ ಖರೀದಿಸಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಜನವರಿ 7 ರಿಂದ 17 ರವರೆಗೆ ಅರ್ಜಿಗಳನ್ನು ಸಂಬಂಧಿಸಿದ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿಗಳು, ಮೊಳಕಾಲ್ಮೂರು ಇಲ್ಲಿ ಕಛೇರಿ ವೇಳೆ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಸಂಪರ್ಕಿಸಬುಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ತಿಳಿಸಿದ್ದಾರೆ.
[t4b-ticker]
+ There are no comments
Add yours