ಚಿತ್ರದುರ್ಗದ ಸ್ವಾಭಿಮಾನಿ ಬಂಧುಗಳೇ….
ತಮಗೆಲ್ಲರಿಗೂ ತಿಳಿದಿರುವಂತೆ ನಮ್ಮೆಲ್ಲರ ಅಚ್ಚುಮೆಚ್ಚಿನ ಯುವ ಉತ್ಸಾಹಿ ಜನನಾಯಕ ಜಿ. ರಘು ಆಚಾರ್ ಅವರು ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಎಲ್ಲಾ ರೀತಿಯ ಸಿದ್ದತೆ ನಡೆಸಿದ್ದರು. ಆದರೆ ಜಿ.ರಘು ಆಚಾರ್ ಅವರಿಗೆ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದೆ. ತಮ್ಮಿಡಿ ಬದುಕನ್ನೇ ಕಾಂಗ್ರೆಸ್ ಪಕ್ಷ ಸಂಘಟನೆಗೆ ಮೀಸಲಿಟ್ಟು ಹಗಲು ಇರುಳು ದುಡಿಯುತ್ತಿದ್ದ ರಘು ಆಚಾರ್ ಹಾಗೂ ಅವರ ಅಸಂಖ್ಯಾತ ನಿಷ್ಟಾವಂತ ಅನುಯಾಯಿಗಳಿಗೆ ಇದರಿಂದ ತೀವ್ರ ನೋವಾಗಿದೆ.
ಶ್ರೀ ರಘು ಆಚಾರ್ ಅವರು ಸುಮಾರು ಎರಡು ದಶಕಗಳಿಂದ ಕಾಂಗ್ರೆಸ್ ಪಕ್ಷದ ಸರ್ವಾಂಗೀಣ ಬೆಳವಣಿಗೆಗಾಗಿ ತಮ್ಮ ತನು ಮನ ಧನವನ್ನು ವಿನಿಯೋಗಿಸಿ ಅವಿಶ್ರಾಂತವಾಗಿ ದುಡಿದಿದ್ದಾರೆ. ವಿಧಾನ ಪರಿಷತ್ ಸದಸ್ಯರಾಗಿದ್ದ ಅವರಿಗೆ ಪಕ್ಷದ ಹಿರಿಯರು ವಿಧಾನಸಭೆಗೆ ಸ್ಪರ್ಧಿಸುವಂತೆ ಸೂಚಿಸಿದ್ದರಿಂದಲೇ ಚಿತ್ರದುರ್ಗದಲ್ಲಿ ವಾಸ್ತವ್ಯ ಹೂಡಿ, ಗ್ರಾಮ ಗ್ರಾಮಗಳಿಗೂ ಭೇಟಿ ನೀಡಿ, ಕಾರ್ಯಕರ್ತರು ಮತ್ತು ಜನತೆಯನ್ನು ಸಂಘಟಿಸಿ ಅವರು ಶ್ರಮಿಸಿದ್ದನ್ನು ನಾವೆಲ್ಲರೂ ಅರಿತಿದ್ದೇವೆ.
ಆದರೆ ಕೊನೆಯ ಕ್ಷಣದಲ್ಲಿ ಕಾಣದ ಕೈಗಳು ಷಡ್ಯಂತ್ರ ಹೂಡಿ ಅವರಿಗೆ ನ್ಯಾಯಯುತವಾಗಿ ಸಿಗಬೇಕಿದ್ದ ಟಿಕೆಟ್ ತಪ್ಪಿಸಲಾಗಿದೆ. ಪಕ್ಷದ ಈ ನಿರ್ಧಾರದಿಂದ ಚಿತ್ರದುರ್ಗದಲ್ಲಿ ರಘು ಆಚಾರ್ ಅವರ ಅಪಾರ ಬೆಂಬಲಿಗರಿಗೆ ಅತೀವ ಬೇಸರ ಮತ್ತು ದುಃಖವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮುಂದಿನ ನಡೆಯನ್ನು ನಿರ್ಧರಿಸಲು ಇದೇ ಏಪ್ರಿಲ್ ೦೯ರಂದು ಬೆಳಗ್ಗೆ ೧೧ ಗಂಟೆಗೆ ಚಿತ್ರದುರ್ಗದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ರಘು ಆಚಾರ್ ಅವರ ಆಪ್ತ ಬೆಂಬಲಿಗರ ಸಭೆ ಕರೆಯಲಾಗಿದೆ. ಸಭೆಯಲ್ಲಿ ನಮ್ಮೆಲ್ಲರ ಮೆಚ್ಚಿನ ಜನನಾಯಕ ರಘು ಆಚಾರ್ ಅವರ ಮುಂದಿನ ನಡೆ ಏನು ಎಂಬುದರ ಕುರಿತು ನಾವೆಲ್ಲರೂ ಚರ್ಚಿಸಿ ಒಂದು ದೃಢ ನಿರ್ಧಾರಕ್ಕೆ ಬರಬೇಕಾಗಿದೆ.
ಮುಂಬರುವ ಚುನಾವಣೆಯಲ್ಲಿ ಶ್ರೀ ರಘು ಆಚಾರ್ ಅವರನ್ನು ಚುನಾವಣಾ ಕಣದಲ್ಲಿ ನಿಲ್ಲಿಸಿ ಅವರ ಉಮೇದುವಾರಿಕೆಯನ್ನು ಬಲಪಡಿಸಲು ತಮ್ಮ ಸಲಹೆ ಮಾರ್ಗದರ್ಶನದ ಅಗತ್ಯವಿರುತ್ತದೆ. ಹೀಗಾಗಿ ಶ್ರೀ ರಘು ಆಚಾರ್ ಅವರ ಆಪ್ತ ವಿಶ್ವಾಸಿಕರು ಮತ್ತು ಅನುಯಾಯಿಗಳಾದ ತಾವು ಈ ಸಭೆಯಲ್ಲಿ ಉಪಸ್ಥಿತರಿದ್ದು ತಮ್ಮ ಅಮೂಲ್ಯ ಸಲಹೆ ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ರಘು ಆಚಾರ್ ಮನವಿ ಮಾಡಿದ್ದಾರೆ.
[t4b-ticker]
+ There are no comments
Add yours