ನಗರಸಭೆಯಿಂದ ವಿವಿಧ ಸೌಲಭ್ಯ ನೀಡಲು ಎಲ್ಲಾ ಸಿದ್ದತೆ:ಶಾಸಕ ಟಿ.ರಘುಮೂರ್ತಿ

 

ಚಳ್ಳಕೆರೆ-23 :ನಗರದ ಜನರಿಗೆ ನಗರಸಭೆಯಿಂದ ಹಲವಾರು ಸೌಲಭ್ಯ ನೀಡಲು ಈಗಾಗಲೇ ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ಅದರಲ್ಲಿ ಮುಖ್ಯವಾಗಿ, ನಗರಕ್ಕೆ‌ ಅಗತ್ಯವಿರುವ ಮುಕ್ತಿವಾಹನ ಸೇವೆ ಇಂದಿನಿಂದ‌ ಒದಗಿಸಲಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು ನಗರದ ನಗರಸಭೆ ಕಚೇರಿಯಲ್ಲಿ ನಗರಸಭೆ ಅನುದಾನದ 20ಲಕ್ಷ ವೆಚ್ಚದಲ್ಲಿ ತರಲಾದ ಮುಕ್ತಿವಾಹನ ಲೋಕಾರ್ಪಣೆ ಮಾಡಿ ಮಾತನಾಡಿದರು. ‌ನಗರ ಪ್ರತಿನಿತ್ಯವೂ ಬೆಳೆಯುತ್ತಿದೆ.‌ ಜನರಿಗೆ ಅಗತ್ಯಕ್ಕೆ ತಕ್ಕಂತೆ ನಗರಸಭೆಯೂ ಸನ್ನದ್ದವಾಗಬೇಕಿದೆ. ಜನರು ಈ ಮುಕ್ತಿವಾಹನನದ ಸೇವೆಯನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ, ಉಪಾಧ್ಯಕ್ಷೆ ಮಂಜುಳಾ ಆರ್ ಪ್ರಸನ್ ಕುಮಾರ್, ನಗರಸಭೆ ಸದಸ್ಯರಾದ ಸುಮಾ ಭರಮಯ್ಯ, ಕವಿತಾ ಬೋರಯ್ಯ, ಸುಜಾತ ಪ್ರಹಲ್ಲಾದ್, ಜೈತಂಬಿ, ಮಲ್ಲಿಕಾರ್ಜುನ, ವೀರಭದ್ರಪ್ಪ, ಪೌರಾಯುಕ್ತ ಸಿ.ಚಂದ್ರಪ್ಪ ಮುಂತಾದವರು ಇದ್ದರು.

[t4b-ticker]

You May Also Like

More From Author

+ There are no comments

Add yours