ಬೆಂಗಳೂರು,ಆ.೧೨-ಕಳೆದ ೨೦೧೧ರಲ್ಲಿ ಸ್ವಯಂ ಕೃಷಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟ ಹಾಗೂ ನಿರ್ಮಾಪಕನಾಗಿ ಕಾಲಿಟ್ಟ ವೀರೇಂದ್ರ ಬಾಬು ನನ್ನು ಅತ್ಯಾಚಾರ ಪ್ರಕರಣದ ಸಂಬಂಧ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವೀರೇಂದ್ರ ಬಾಬು ಮಾಹಿಳೆಯೊಬ್ಬರಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿ ಅದನ್ನು ವಿಡಿಯೋ ಮಾಡಿಕೊಂಡು ಆಗಾಗ ಬೆದರಿಕೆ ಹಾಕುತ್ತಿದ್ದರಂತೆ. ಸುಮ್ಮನೆ ಬೆದರಿಕೆ ಅಲ್ಲ ಆಕೆಯಿಂದ ೧೫ ಲಕ್ಷ ಹಣ ಬೇಡಿಕೆಯಿಟ್ಟು ಬೆದರಿಕೆ ಹಾಕುತ್ತಿದ್ದು,ಒಂದು ವೇಳೆ ಹಣ ನೀಡದಿದ್ದರೆ ವಿಡಿಯೋ ಲೀಕ್ ಮಾಡುವುದಾಗಿಯೂ ಬೆದರಿಕೆ ಹಾಕುತ್ತಿದ್ದು . ಈ ಘಟನೆ ೨೦೨೧ರಲ್ಲಿ ನಡೆದಿದೆ.ಅಂದೇ ಆ ಮಹಿಳೆ ಒಡವೆ ಮಾರಿ ಹಣ ಕೊಟ್ಟಿದ್ದಾರೆ. ಅಲ್ಲಿಗೆ ಸುಮ್ಮನಾಗಿದ್ದ ವೀರೇಂದ್ರ ಬಾಬು ಕಳೆದ ಜುಲೈ ೩೦ರಿಂದ ಮತ್ತೆ ಮಹಿಳೆಗೆ ಕರೆ ಮಾಡಿ ಮತ್ತೊಮ್ಮೆ ಬೆದರಿಕೆ ಹಾಕಿದ್ದಾನೆ. ಒಮ್ಮೆ ಮಹಿಳೆಯನ್ನು ಕಾರಿನಲ್ಲಿ ಸುತ್ತಾಡಿಸಿ ಮೈ ಮೇಲಿದ್ದ ಚಿನ್ನಾಭರಣಗಳನ್ನು ಕಿತ್ತುಕೊಂಡಿದ್ದಾನೆ. ವೀರೇಂದ್ರ ಸುಮ್ಮನೆ ಬೆದರಿಕೆ ಹಾಕುತ್ತಿರಲಿಲ್ಲ ಪಾಯಿಂಟ್ ಬ್ಲಾಕ್ ಗನ್ ಇಟ್ಟು ಬೆದರಿಸುತ್ತಿದ್ದ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ವೀರೇಂದ್ರ ಬಾಬು ಮತ್ತು ಸ್ನೇಹಿತರ ವಿರುದ್ಧ ಕೊಡಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳು ಸೆರೆಯಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. ಕೆಲವು ತಿಂಗಳುಗಳ ಹಿಂದೆ ವೀರೇಂದ್ರ ಬಾಬು ೧.೮ ಕೋಟಿ ರೂಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು
[t4b-ticker]
+ There are no comments
Add yours