ಜ್ಯೋತಿಷ್ಯನ ಮಾತು ಕೇಳಿ ಪ್ರೀಯಕರನಿಗೆ ವಿಷ ಕೊಟ್ಟು ಪ್ರಾಣ ತೆಗೆದ ಯುವತಿ

 

ರುವನಂತಪುರಂ: ಕೇರಳದಲ್ಲಿ ಇತ್ತೀಚೆಗೆ ಮೂಢನಂಬಿಕೆಯಿಂದ ನಡೆದ ನರಬಲಿ ಪ್ರಕರಣ ಇಡೀ ದೇಶವನ್ನು ಒಂದು ಕ್ಷಣ ತಲ್ಲಣಗೊಳಿಸಿತ್ತು . ಇದೀಗ ಇಂತಹದೇ ಮತ್ತೊಂದು ಪ್ರಕರಣ ವರದಿಯಾಗಿದೆ.

ತಮಿಳುನಾಡು-ಕೇರಳ ಗಡಿಯಲ್ಲಿರುವ ರಾಮವರಂ ಚಿರಾ ಎಂಬ ಊರಿನ 22 ವರ್ಷದ ಶರೋನ್ ರಾಜ್ ಎಂಬ ಯುವಕ ಕೊಲೆಯಾದ ದುರ್ದೈವಿಯಾಗಿದ್ದಾನೆ.

ಶರೋನ್ ರಾಜ್‌ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಗ್ರೀಷ್ಮಾ ಎಂಬ 22 ವರ್ಷದ ಯುವತಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಳು. ಆ ನಂತರ ಈ ಸಂಬಂಧ ಮುರಿದು ಬಿದ್ದು ಗ್ರೀಷ್ಮಾ ಮತ್ತೊಂದು ಹುಡುಗನ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದಳು. ಆದರೆ, ಜ್ಯೋತಿಷಿಯೊಬ್ಬ, ನಿನ್ನ ಮೊದಲನೇ ಸಬಂಧದ ವರ ಸತ್ತರೇ ಮಾತ್ರ ನೀನು ನಿನ್ನ ಮುಂದಿನ ಜೀವನದಲ್ಲಿ ಸಂತೋಷವಾಗಿರಬಹುದು ಎಂಬ ಭವಿಷ್ಯ ನುಡಿದಿದ್ದನಂತೆ .

ಇದನ್ನು ನಂಬಿದ ಗ್ರೀಷ್ಮಾ, ಶರೋನ್ ರಾಜ್‌ನನ್ನು ನಂಬಿಸಿ ಮನೆಗೆ ಕರೆಸಿಕೊಂಡು ಕಾಪರ್ ಸಲ್ಪೇಟ್ ಮಿಶ್ರಿತ ವಿಷವನ್ನು ಆಯರ್ವೇದ ಔಷಧಿ ಎಂದು ಕುಡಿಸಿದ್ದಳು. ಆದರೆ, ಶರೋನ್ ರಾಜ್ ಚಿಕಿತ್ಸೆ ಫಲಿಸದೇ ಕಳೆದ ಅಕ್ಟೋಬರ್ 25 ರಂದು ಮೃತರಾಗಿದ್ದಾರೆ.

ಪ್ರಕರಣದ ತನಿಖೆಯನ್ನು ವಿಶೇಷ ಅಪರಾಧ ದಳಕ್ಕೆ ವಹಿಸಲಾಗಿದ್ದು, ಗ್ರೀಷ್ಮಾ ವಿಷಪ್ರಾಶನ ಮಾಡಿಸಿದ ಸಂಗತಿ ಬೆಳಕಿಗೆ ಬಂದಿದೆ, ತನಿಖೆ ನಡೆಯುತ್ತಿದೆ ಎಂದು ತಿರುವನಂತಪುರ ಗ್ರಾಮೀಣ ಎಸ್‌ಪಿ ದಿವ್ಯಾ ಗೋಪಿನಾಥ್  ಅವರು ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours