ಮನುಕುಲದ ಉದ್ಧಾರಕ್ಕೆ ಉತ್ತಮ ಸಂದೇಶ ನೀಡಿದ ಮಹನೀಯ ಸವಿತಾ ಮಹರ್ಷಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜ.28
  ಮನುಕುಲದ ಶ್ರೇಯಸ್ಸಿಗೆ, ಕಾಯಕ ತತ್ವಗಳನ್ನು ಒಳಗೊಂಡ ಉತ್ತಮ ಸಂದೇಶ ನೀಡಿದ ಮಹನೀಯರು ಸವಿತಾ ಮಹರ್ಷಿಗಳು, ಅವರ ತತ್ವ ಸಿದ್ಧಾಂತಗಳು ಎಲ್ಲ ವರ್ಗಕ್ಕೂ ಅನ್ವಯಿಸುತ್ತದೆ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರು ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ,  ಸವಿತಾ ಮಹರ್ಷಿ ಜಯಂತಿ  ಕಾರ್ಯಕ್ರಮ  ಉದ್ಘಾಟಿಸಿ ಹಾಗೂ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸವಿತಾ ಮಹರ್ಷಿಗಳ ಸಿದ್ದಾಂತಗಳು, ಬೋಧನೆಗಳು ಬಹಳ ಜನಕ್ಕೆ ತಿಳಿದಿಲ್ಲ.  ಮನುಕುಲದ ಉದ್ಧಾರಕ್ಕಾಗಿ ಅವರು ನೀಡಿರುವ ಸಂದೇಶ ಉತ್ತಮ ಸಮಾಜಕ್ಕೆ ಸ್ಫೂರ್ತಿಯಾಗಿದೆ. ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಸವಿತಾ ಸಮಾಜ ನೆಲೆಸಿದ್ದು, ಪ್ರತಿಯೊಂದು ಶುಭ ಕಾರ್ಯಗಳಿಗೂ ಈ ಸಮಾಜ ಸೇವೆ ಸಲ್ಲಿಸುತ್ತದೆ ಎಂಬುದು ಗಮನಾರ್ಹ.  ಸಾಧಕರ ಜಯಂತಿಗಳು, ಕೇವಲ ಆಯಾ ವರ್ಗದ ಸಮಾಜಕ್ಕೆ ಸೀಮಿತವಾಗುತ್ತಿರುವುದು ಸರಿಯಲ್ಲ,  ಇದನ್ನು ನಾವು ಅಂಬೇಡ್ಕರ್ ಜಯಂತಿ, ಬಸವಣ್ಣನವರ ಜಯಂತಿ ಹೀಗೆ ಅನೇಕ ಮಹನೀಯರ ಜಯಂತಿ ಆಚರಣೆಗಳಲ್ಲಿ ಕಾಣುತ್ತಿದ್ದೇವೆ.  ಸಾಧಕರ ತತ್ವÀ ಸಿದ್ಧಾಂತಗಳು, ವಿಚಾರಗಳು ಎಲ್ಲ ಸಮುದಾಯಕ್ಕೂ ಅನ್ವಯವಾಗುವುದರಿಂದ, ಇಂತಹ ಜಯಂತಿಗಳಿಗೆ ಎಲ್ಲ ಸಮುದಾಯದವರು ಪಾಲ್ಗೊಳ್ಳಬೇಕು. ಆಧುನಿಕ ವ್ಯವಸ್ಥೆಯಲ್ಲಿ ಸವಿತಾ ಸಮಾಜದವರ ಕಾಯಕದ ಸ್ವರೂಪವೂ ಕೂಡ ಬದಲಾಗಿದೆ.  ಸವಿತಾ ಸಮುದಾಯವಷ್ಟೇ ಅಲ್ಲದೆ ಬೇರೆ ಸಮಾಜದವರೂ ಕೂಡ ಈ ಕಾಯಕ ಮಾಡುತ್ತಿದ್ದಾರೆ.  ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಸಂಕಷ್ಟಕ್ಕೆ ಒಳಗಾದ ಸಮುದಾಯದಲ್ಲಿ ಸವಿತಾ ಸಮಾಜವೂ ಕೂಡ ಒಂದು.  ಸರ್ಕಾರದಿಂದ ಈ ವರ್ಗಕ್ಕೆ ಪರಿಹಾರವನ್ನು ಕೂಡ ಕಲ್ಪಿಸಲಾಯಿತು.  ಸವಿತಾ ಸಮಾಜ ಹಿಂದುಳಿದ ಸಮುದಾಯವಾಗಿದ್ದು, ಸಮಾಜದ ಯುವಕರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ತಿಪ್ಪಾರೆಡ್ಡಿ ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ  ಅವರು ಮಾತನಾಡಿ, ಸವಿತಾ ಮಹರ್ಷಿ ಸಮಾಜದವರು ತಮ್ಮ ವೃತ್ತಿಯಾದ ಕ್ಷೌರಿಕವನ್ನು ಪರಂಪರೆಯಿಂದ ಉಳಿಸಿಕೊಂಡು ಬಂದಿದ್ದಾರೆ ಮತ್ತು ಹಿಂದಿನ ಕಾಲದಲ್ಲಿ ಇದನ್ನು ಒಂದು ಉದ್ಯೋಗವಾಗಿ ಇಟ್ಟುಕೊಂಡಿದ್ದರು, ಇವತ್ತಿಗೂ ಕೂಡ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆಧುನಿಕ ಜಗತ್ತಿಗೆ ತಕ್ಕಂತೆ ಅವರ ಕಾಯಕ ಶೈಲಿಯೂ ಕೂಡ ಬದಲಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಅವರು ಅಳವಡಿಸಿಕೊಳ್ಳುತ್ತಿದ್ದಾರೆ.  ಸವಿತಾ ಸಮಾಜದವರು ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಮತ್ತು ಶಿಕ್ಷಣವನ್ನು ಪಡೆಯುವಲ್ಲಿ ಮುಂಚೂಣಿಯಲ್ಲಿದ್ದು, ಅನೇಕರು ಉನ್ನತ ವೃತ್ತಿಯಲ್ಲಿದ್ದಾರೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ತಿಪ್ಪೇಸ್ವಾಮಿ ಸಂಪಿಗೆ ಅವರು,  ಸವಿತ ಸಮಾಜವು ಒಂದು ಪವಿತ್ರ ಮತ್ತು ಸರ್ವಶ್ರೇಷ್ಠವಾದ ಸಮಾಜವಾಗಿದೆ, ಈ ಸಮಾಜದಲ್ಲಿ ಹುಟ್ಟಿರುವಂತಹವರು ಹೆಮ್ಮೆ ಪಡಬೇಕು, ಮನುಷ್ಯ ಹುಟ್ಟಿನಿಂದಲೂ ಸಾಯುವರೆಗೂ ಅವರಿಗೆ ಸವಿತ ಸಮಾಜದವರು ಬೇಕಾಗುತ್ತಾರೆ, ಹಾಗೂ ವೇದಗಳ ಕಾಲಗಳಲ್ಲಿ ಸವಿತಾ ಸಮಾಜದ ಉಲ್ಲೇಖಗಳು ಇವೆ, ಕೆಲವು ಸಲ ಅವಮಾನಗಳು ಆಗುತ್ತವೆ ಆದರೆ ನಾವು ಅವುಗಳನ್ನು ಮೆಟ್ಟಿ ನಿಲ್ಲಬೇಕು, ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ. ಮಲ್ಲಿಕಾರ್ಜುನ್, ಸವಿತಾ ಸಮಾಜದ ಅಧ್ಯಕ್ಷರಾದ ಜಿ ಎನ್ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎನ್ ಡಿ ಕುಮಾರ್, ಸೇರಿದಂತೆ ಸಮಾಜದ ಮುಖಂಡರಾದ ತಿಪ್ಪೇಸ್ವಾಮಿ, ಆರ್.ಶ್ರೀನಿವಾಸ್, ನಾಗರಾಜ್, ಕವಿತಾ ಶಾಮ್, ಹನುಮಂತಪ್ಪ, ರಾಜು, ರಂಜಿತ್, ಪ್ರಸನ್ನ ಸೇರಿದಂತೆ ವಿವಿಧ ಗಣ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು  ಉಪಸ್ಥಿತರಿದ್ದರು.
ಸಮಾರಂಭಕ್ಕೂ ಮುನ್ನ ಸವಿತಾ ಮಹರ್ಷಿಗಳ ಭಾವಚಿತ್ರದ ಅದ್ಧೂರಿ ಮೆರವಣಿಗೆಗೆ ನಗರದ ನೀಲಕಂಠೇಶ್ವರ ದೇವಸ್ಥಾನದ ಬಳಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.  ಮೆರವಣಿಗೆಯು ಗಾಂಧಿವೃತ್ತ, ಅಂಬೇಡ್ಕರ್ ವೃತ್ತ ಮೂಲಕ ತ.ರಾ.ಸು. ರಂಗಮಂದಿರದವರೆಗೂ ನೆರವೇರಿತು.  ಮೆರವಣಿಗೆಯಲ್ಲಿ ಹಲವು ಕಲಾತಂಡಗಳು ಪಾಲ್ಗೊಂಡಿದ್ದವು.

[t4b-ticker]

You May Also Like

More From Author

+ There are no comments

Add yours