KSRTC ಬಸ್ ಬೈಕ್ ಡಿಕ್ಕಿ ಓರ್ವ ಸಾವು

 

 

 

 

ಚಳ್ಳಕೆರೆ-೧೭ ಚಳ್ಳಕೆರೆ ಠಾಣಾ ವ್ಯಾಪ್ತಿಯ ವೀರದಿಮ್ಮನಹಳ್ಳಿ ಕ್ರಾಸ್ ಬಳಿ ಮಂಗಳವಾರ ಚಳ್ಳಕೆರೆ ಯಿಂದ ನಾಯಕನಹಟ್ಟಿಗೆ ಹೋಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC) ಬಸ್  ಎದುರಿಗೆ ಬಂದ ಮೋಟಾರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಯುವಕರಿಗೆ ಪ್ರಾಣಾಂತಿಕ ಗಾಯಗಳಾಗಿವೆ.

 

 

ಇದನ್ನೂ ಓದಿ: ಅಗ್ನಿ ಆಕಸ್ಮಿಕ ಸಂಪೂರ್ಣವಾಗಿ ಸುಟ್ಟುಹೋದ ಗುಡಿಸಲು
ಈ ಬಗ್ಗೆ ದೂರು ನೀಡಿರುವ ಎಂ.ಎಂ.ಸಣ್ಣಮಲ್ಲಯ್ಯ, ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಅತಿವೇಗ ಚಾಲನೆ ಹಾಗೂ ನಿರ್ಲಕ್ಷö್ಯದಿಂದ ಈ ಅಪಘಾತ ಸಂಭವಿಸಿದ್ದು, ಸದರಿ ಅಪಘಾತದಲ್ಲಿ ಮಲ್ಲೂರಹಳ್ಳಿಯ ಪುನಿತ(೧೯), ನವೀನ್(೨೨), ಮಲ್ಲೇಶ್(೧೯) ಇವರು ಗಾಯಗೊಂಡಿದ್ದು, ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ತೀರ್ವವಾಗಿ ಗಾಯಗೊಂಡಿದ್ದ ನವೀನ್ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಉಳಿದ ಇಬ್ಬರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ಧಾರೆ. ಅಪಘಾತವೆಸಗಿದ ಬಸ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿರುತ್ತಾರೆ. ಠಾಣಾಧಿಕಾರಿ ಶಿವಕುಮಾರ್ ಪ್ರಕರಣ ದಾಖಲಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours