ನಾಯಿಗಳ ನೆರವಿನಿಂದ ಚಿಪ್ಪು ಹಂದಿ ಬೇಟೆಯಾಡಿದ 5 ಜನ ಅರೆಸ್ಟ್

 

ಹೊಳಲ್ಕೆರೆ: ನಾಯಿಗಳ ನೆರವಿನಿಂದ ಚಿಪ್ಪು ಹಂದಿ ಬೇಟೆಯಾಡುತ್ತಿದ್ದ ಐವರನ್ನು ಬಂಧಿಸಿದ ಹೊಳಲ್ಕೆರೆ ಅರಣ್ಯ ಇಲಾಖೆ ಸಿಬ್ಬಂದಿಗಳು 3 ಕೆ.ಜಿ ಹಂದಿ ಚಿಪ್ಪು ಉಗುರು ವಶ

ಅಕ್ರಮವಾಗಿ ಬೇಟೆಯಾಡಿ ಚಿಪ್ಪುಹಂದಿಗಳನ್ನು ಕೊಂದು ಅವುಗಳ ಚಿಪ್ಪು ಮತ್ತು ಉಗುರುಗಳನ್ನು ಮಾರುತ್ತಿದ್ದ ಐವರನ್ನು ಹೊಳಲ್ಕೆರೆ ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ…
ಇನ್ನೂ ಬಂಧಿತ ಆರೋಪಿಗಳಿಂದ 3.2 ಕೆ ಹಂದಿ ಚಿಪ್ಪು ಹಾಗೂ ಉಗುರುಗಳನ್ನು ವಶಪಡಿಸಿಕೊಂಡಿದ್ದಾರೆ…

ಇನ್ನೂ ಬಂಧಿತ ಆರೋಪಿಗಳನ್ನು ಚಿತ್ರದುರ್ಗ ತಾಲ್ಲೂಕಿನ ಯರೇಹಳ್ಳಿಯ ಎಂ ಬಸವರಾಜು, ಹೊಸದುರ್ಗ ತಾಲೂಕಿನ ಗೂಳಿಹಟ್ಟಿಯ ಮಂಜುನಾಥ್ ಮಾದಿಹಳ್ಖಿಯ ಗುರುಮೂರ್ತಿ ಹೊಳಲ್ಕೆರೆಯ ಕೊಮ್ಮೆರನಹಳ್ಳಿಯ ಮೂಡ್ಲಪ್ಪ ಬೂತಯ್ಮನ ಹಟ್ಟಿಯ ದೇವರಾಜ ಬಂಧಿತ ಆರೋಪಿಗಳಾಗಿದ್ದು ಇಬ್ಬರು ಪರಾರಿಯಾಗಿದ್ದಾರೆ…

ಇನ್ನೂ ಈ ಒಂದು ಜಾಲವನ್ನು ಬೇಧಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳು ಹಂದಿಚಿಪ್ಪು ಖರೀದಿಸುವ ನೆಪದಲ್ಕಿ ಕಾರ್ಯಚರಣೆ ಮಾಡಿ ಉಪಾಯದಿಂದ ಆರೋಪಿಗಳನ್ಜು ಬಂಧಿಸಲಾಗಿದೆ ….ಇನ್ನೂ ಕಳ್ಳರು ಒಂದು ಕೆ.ಜಿ ಚಿಪ್ಪಿಗೆ 5 ಲಕ್ಷ ಬೇಡಿಗೆ ಇಟ್ಟಿದ್ದರು….ಎಂದು ತಿಳಿದುಬಂದಿದೆ…….

[t4b-ticker]

You May Also Like

More From Author

+ There are no comments

Add yours