ಕೇಂದ್ರ ಸರ್ಕಾರ ಆದೇಶದನ್ವಯ ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಮರಣ ಹೊಂದಿರುವ ಪರಿಶಿಷ್ಟ ಜಾತಿಯ ಕುಟುಂಬದವರಿಗೆ ಎನ್.ಎಸ್.ಎಫ್.ಡಿಯಿಂದ 5 ಲಕ್ಷ ರೂ. ಇದರಲ್ಲಿ ಶೇ.6 ರಷ್ಟು ಬಡ್ಡಿ ದರದಲ್ಲಿ 4 ಲಕ್ಷ ರೂ ಅವಧಿಸಾಲ ಮತ್ತು 1 ಲಕ್ಷ ಸಹಾಯಧನ ರೂಪದಲ್ಲಿ ಆರ್ಥಿಕ ಸಹಾಯ ನೀಡಲು ಉದ್ದೇಶಿಸಲಾಗಿದೆ. ಈ ಯೋಜನೆಯಡಿ ಸೌಲಭ್ಯ ಪಡೆಯಲು ಮೃತ ವ್ಯಕ್ತಿ ಪರಿಶಿಷ್ಟ ಜಾತಿಗೆ ಸೇರಿದ್ದು, 18 ರಿಂದ 60 ವರ್ಷದೊಳಗಿರಬೇಕು. ವಾರ್ಷಿಕ ಆದಾಯ 3 ಲಕ್ಷ ರೂ ಒಳಗಿರಬೇಕು ಹಾಗೂ ಕೋವಿಡ್ನಿಂದ ಮರಣ ಹೊಂದಿದ ಮರಣ ಪ್ರಮಾಣ ಪತ್ರ ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಪರಿಶಿಷ್ಟ ವರ್ಗಗಗಳ ಅಭಿವೃದ್ಧಿ ನಿಗಮಗಳ ಕಚೇರಿಗಳ ವ್ಯವಸ್ಥಾಪರಿಗೆ ದಾಖಲೆ ಮತ್ತು ಕೇಲವು ಕಡೆಗಳಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖಾಂತರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರು ಕೋವಿಡ್ ನಿಂದ ಮೃತಪಟ್ಟಿ ಇಲಾಖೆ ನೀಡಲು ತಿಳಿಸಲಾಗಿದೆ.
[t4b-ticker]
+ There are no comments
Add yours