ಚಿತ್ರದುರ್ಗ: ಮೃತ ಸನ್ಯಾಸಿ ಗಂಗಾಧರ ಶಾಸ್ತ್ರಿ ಮನೆಯಲ್ಲಿ ಲಕ್ಷಾಂತರ ಹಣ ಪತ್ತೆ ಆಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿರುವ ಮನೆ ದೊರಕಿದೆ.
ಹೊಳಲ್ಕೆರೆಯಲ್ಲಿ ವಾರದ ಹಿಂದೆ ಮೃತಪಟ್ಟಿದ್ದ ಗಂಗಾಧರ ಶಾಸ್ತ್ರಿ(೭೦) ವಾಸಿಸುತ್ತಿದ್ದ ಮನೆಯ ವಿವಿಧೆಡೆ ಇಟ್ಟಿದ್ದ ೩೦ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ.
ಒಂಟಿಯಾಗಿ ಬದುಕು ಸವೆಸಿದ್ದ ಗಂಗಾಧರ ಶಾಸ್ತ್ರಿ ಅವರು ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುವ ಕಾಯಕವನ್ನು ಮಾಡುತ್ತಿದ್ದರು. ಇವರಿಗೆ
೧೬ಎಕರೆ ಜಮೀನಿದ್ದು ೪ ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು. ಭಕ್ತರಿಂದ ಬಂದ ಕಾಣಿಕೆ ಹಣವೇ ೪೬ಸಾವಿರ ರೂಪಾಯಿ ಇತ್ತು. ಕೃಷಿ ಮತ್ತಿತರೆ ಆದಾಯದಿಂದ ಬಂದ ೩೦ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದ್ದು ೨ ದಿನ ಹಿಂದೆ ಭಕ್ತರು ಶಾಸ್ತ್ರಿ ಮನೆ ಪರಿಶೀಲಿಸಿದಾಗ ಹಣ ದೊರಕಿದೆ ಎಂದು ತಿಳಿದು ಬಂದಿದೆ. ಜುಲೈ ೭ಕ್ಕೆ ಭಕ್ತರ ಸಭೆ ಕರೆದು ಸಮಿತಿ ರಚನೆ ಮಾಡಲು ಸ್ಥಳೀಯರ ನಿರ್ಧಾರ ಮಾಡಿದ್ದು ಸ್ವಾಮೀಜಿ ಅವರ ಜಮೀನಿನಲ್ಲಿ ಗಂಗಾಧರ ಶಾಸ್ತ್ರಿ ಗದ್ದುಗೆ ನಿರ್ಮಿಸಲು ಸ್ಥಳೀಯರ ನಿರ್ಧಾರ ಮಾಡಿದ್ದಾರೆ.
+ There are no comments
Add yours