ಸಾಯಿ ಪ್ಯಾಲೇಸ್ ಬಳಿ ಕಾರ್ ಪಲ್ಟಿ, ಗಾಯಾಳುಗಖ ಆಸ್ಪತ್ರೆ ಸೇರಿಸಿ ಮಾನವೀಯತೆ ಮೇರೆದ ಸಭಾಪತಿ ಬಸವರಾಜ್ ಹೊರಟ್ಟಿ‌

 

ಕೊಳಹಾಳ್ ಸಮೀಪದ ಸಾಯಿ ಪ್ಯಾಲೆಸ್ ಬಳಿ ಕಾರ್ ಪಲ್ಟಿ: ನಾಲ್ವರಿಗೆ ಗಾಯ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವವೀಯತೆ ಮೇರೆದ ಸಭಾಪತಿ ಬಸವರಾಜ್ ಹೊರಟ್ಟಿ

ಕೊಳಾಳ್ ಸಮೀಪದ ಸಾಯಿ ಪ್ಯಾಲೇಸ್ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಕಾರಿನಲ್ಕಿದ್ದ ನಾಲ್ವರು ಗಾಯಗೊಂಡಿದ್ದರು…ಇನ್ನೂ ಅದೇ ಮಾರ್ಗದಲ್ಕಿ ಬರುತ್ತಿದ್ದ ಸಭಾಪತಿ ಬಸವರಾಜ್ ಹೊರಟ್ಟಿ ರವರು ಗಾಯಗೊಂಡವರನ್ಜು ತಕ್ಷಣವೇ ಉಪಚರಿಸಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೇರೆದಿದ್ದಾರೆ…

ಇನ್ನೂ ಈ ಅಪಘಾತದಲ್ಕಿ ಗಾಯಗೊಂಡವರನ್ನು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದ್ದು ವರದರಾಜ್ ಮೋಹನ್ ಕುಮಾರ್ ನಾಗೇಂದ್ರ ರಾವ್ ಮತ್ತು ಮಂಜುನಾಥ್ ಎಂದು ಗುರುತಿಸಲಾಗಿದೆ…

ಇವರೆಲ್ಲಾರೂ ಪ್ರವಸಕ್ಜೆಂದು ಬಂದಿದ್ದು ಇಡುಗುಂಜಿಯಿಂದ ಬೆಂಗಳೂರಿಗೆ ಹೋಗುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ…ಇನ್ನೂ ಕಾರು ಚಾಲಕನ ಅತೀವೇಗ ಹಾಗೂ ಅಜಾಕೂರುಕತೆಯಿಂದ ಈ ಒಂದು ಘಟನೆ ಸಂಭವಿಸಿದೆ ಎಂದು ಮೆಲ್ ನೋಟಕ್ಕೆ ಕಂಡುಬಂದಿದೆ…ಇನ್ನೂ ಸಭಾಪತಿ ಬಸವರಾಜ್ ಹೊರಟ್ಟಿ ರವರು ಗಾಯಗೊಂಡವರನ್ಹು ತಕ್ಷಣವೇ ಅಂಬುಲೆನ್ಸ್ ಹಾಗೂ ಪೊಲಿಸರಿಗೆ ಕರೆ ಮಾಡಿ ಗಾಯಗೊಂಡವರನ್ನು ಚಿತ್ರದುರ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ…ಇನ್ನೂ ಈ ಘಟನೆ ಸಂಬಂಧ ಭರಮಸಾಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ….

[t4b-ticker]

You May Also Like

More From Author

+ There are no comments

Add yours