ಚಳ್ಳಕೆರೆ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೌರಸಮುದ್ರ ಗ್ರಾಮದ ಮಧ್ಯೆದಲ್ಲಿ ಶಿಥಿಲಗೊಂಡಿರುವ ಹಳೆಯ ಗ್ರಾಪಂ ಕಟ್ಟಡ ತೆರವುಗೊಳಿಸಿ, ಅದೇ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡುವಂತೆ ಗ್ರಾಪಂ ಸದಸ್ಯ ಶಶಿಕುಮಾರ್ ಒತ್ತಾಯ.
ಗ್ರಾಮದ ಮಧ್ಯಭಾಗದಲ್ಲಿ ಶಿಥಿಲಗೊಮಡಿರುವ ಹಳೆ ಗ್ರಾಪಂ ಕಟ್ಟಡ ಹಾಗಲೋ- ಇಗಲೋ ಬೀಳುವ ಸ್ಥಿತಿ ತಲುಪಿದೆ. ಆದ್ದರಿಂದ ಆ ಕಟ್ಟಡವನ್ನು ತೆರವುಗೊಳಿಸಿ, ಅದೇ ಜಾಗದಲ್ಲಿ ಬಸ್ ನಿಲ್ದಾಣ ಮಾಡಬೇಕು ಎಂದು ಕ್ಷೇತ್ರದ ಶಾಸಕರಾದ ಸಚಿವ ಬಿ.ಶ್ರೀರಾಮುಲು ಅವರನ್ನು ಒತ್ತಾಯಿಸಿದ್ದಾರೆ.
ಗೌರ ಸಮುದ್ರ ಗ್ರಾಮಕ್ಕೆ ಗೌರಸಮುದ್ರ ಮಾರಮ್ಮದೇವಿಯ ದರ್ಶನ ಪಡೆಯಲು ಅಪಾರ ಭಕ್ತಾಧಿಗಳು ಬರುತ್ತಾರೆ. ಆದರೆ ಅವರಿಗೆ ನಿಗಧಿತ ಬಸ್ ನಿಲ್ದಾಣವಿಲ್ಲದೆ ಎಲ್ಲಂದರೆ ಅಲ್ಲೆ ಬಸ್ ಗಳಿಗೆ ಕಾಯುತ್ತಿರುತ್ತಾರೆ. ಆದರಿಂದ ಗ್ರಾಮದ ಮಧ್ಯದಲ್ಲಿರುವ ಹಳೆಯ ಗ್ರಾಪಂ ಕಟ್ಟಡ ತೆರವುಗೊಳಿಸಿದ, ಅಲ್ಲಿಯೇ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
[t4b-ticker]
+ There are no comments
Add yours