ರೈತ ಮುಖಂಡರೊಂದಿಗೆ ರಾಜ್ಯ ಕೃಷಿ ಆಯುಕ್ತರು ಮತ್ತು ನಿರ್ದೇಶಕರನ್ನು ಭೇಟಿ ಮಾಡಿದ ಶಾಸಕ ಟಿ ರಘುಮೂರ್ತಿ.
ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲ್ಲೂಕು ರೈತ ಮುಖಂಡರೊಂದಿಗೆ ಬೆಂಗಳೂರಿನಲ್ಲಿ ಕೃಷಿ ನಿರ್ದೇಶಕ ಭೇಟಿ ನೀಡಿದ ಶಾಸಕ ಟಿ ರಘುಮೂರ್ತಿ
ಶಾಸಕ ಟಿ ರಘುಮೂರ್ತಿ ನೇತೃತ್ವದಲ್ಲಿ ಕೃಷಿ ಆಯುಕ್ತರಾದ ಬ್ರಿಜೇಶ್ ಕುಮಾರ್ ಮತ್ತು ಕೃಷಿ ನಿರ್ದೇಶಕ ಬಿ ವೈ ಶ್ರೀನಿವಾಸ್ ರ ಭೇಟಿ ಮಾಡಿದ ರೈತ ಮುಖಂಡರು.
ಜಿಲ್ಲೆಯ ಫಸಲ್ ಭೀಮಾ ಯೋಜನೆ ಮತ್ತು ಬೆಳೆ ಪರಿಹಾರ ಬಿಡುಗಡೆ ಮಾಡಲು ಅನುವು ಮಾಡಿಕೊಡುವಂತೆ ನಿರ್ದೇಶಕರೊಂದಿಗೆ ಶಾಸಕ ಟಿ ರಘುಮೂರ್ತಿ ಚರ್ಚೆ.
ಚಿತ್ರದುರ್ಗ ಜಿಲ್ಲೆಯಾದ್ಯಂತ ಆದ ಅತಿವೃಷ್ಟಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಸಲ್ಲಿಸಿದ್ದ ಬೆಳೆ ವಿಮೆ ಪರಿಹಾರ ರೈತರಿಗೆ ಕೈಗೆ ಸೇರದ ಹಿನ್ನೆಲೆಯಲ್ಲಿ ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮ ಶಾಸಕರಾದ ಟಿ ರಘುಮೂರ್ತಿ ಅವರು, ಬೆಂಗಳೂರು ಕೃಷಿ ಇಲಾಖೆಗೆ ಭೇಟಿ ನೀಡಿ, ಮಹತ್ವದ ಮಾತುಕತೆ ನಡೆಸಿದರು..
ಈ ವೇಳೆ ಕೃಷಿ ನಿರ್ದೇಶಕರೊಂದಿಗೆ ಚರ್ಚೆ ನಡೆಸಿದ ಮಾನ್ಯ ಶಾಸಕರು, ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವರ್ಷದ ಅತೀವೃಷ್ಟಿ ಹಾಗೂ ಈ ವರ್ಷದ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಜೊತೆಗೆ ಕಳೆದ ವರ್ಷ ಸಲ್ಲಿಸಿದ್ದ ಬೆಳೆ ಪರಿಹಾರ ರೈತರ ಕೈಸೇರದೆ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ, ಬೆಳೆ ಪರಿಹಾರ ವಿಮಾ ಕಂಪನಿಗಳೊಂದಿಗೆ ಚರ್ಚೆ ನಡೆಸಿ, ಶೀಘ್ರವಾಗಿ ಬೆಳೆ ಪರಿಹಾರ ದೊರಕಿಸಿ ಕೊಡಲು ಅನುವು ಮಾಡಿಕೊಡುವಂತೆ ಮಾನ್ಯ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ಕೃಷಿ ಇಲಾಖೆ ನಿರ್ದೇಶಕ ರಾದ ಬಿ ವೈ ಶ್ರೀನಿವಾಸ್ ಕೃಷಿ ಅಯುಕ್ತರಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರು ಜಿಲ್ಲಾ ಕುಂದುಕೊರತೆ ಸಭೆಯಲ್ಲಿ ರೈತರ ಅಹವಾಲು ಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಸಭೆಯ ನಡುವಳಿಗಳು ನ್ನು ರಾಜ್ಯ ಮಟ್ಟದ ಸಭೆಗೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು ಮತ್ತು ಫಸಲ್ ಭೀಮಾ ಯೋಜನೆ ಮತ್ತು ಬೆಳೆ ಪರಿಹಾರ ರೈತರ ಅಹವಾಲುಗಳನ್ನು ವಿವರವಾಗಿ ಕೇಂದ್ರಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ತಿಳಿಸಿದರು
ಈ ಸಮಯದಲ್ಲಿ ರೈತ ಮುಖಂಡರಾದ ಭೂತಯ್ಯ ದೇವರೆಡ್ಡಿಹಳ್ಳಿ ಮಂಜುನಾಥರೆಡ್ಡಿ ಬುಕ್ಕಾಂಬುದಿ ಜಗದೀಶ್ ಮಲ್ಲ ಸಮುದ್ರ ಜಯಣ್ಣ ಕ್ಯಾತಣ್ಣ ತಿಪ್ಪೇಸ್ವಾಮಿ ಮುಂತಾದವರು ಹಾಜರಿದ್ದರು.
+ There are no comments
Add yours