ಮೊಳಕಾಲ್ಮುರು ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಕಾರ್ಯಕರ್ತರ ಕೈ ಬಿಡಲ್ಲ.

 

ನಾಯಕನಹಟ್ಟಿ: ಮೊಳಕಾಲ್ಮುರು ವಿಧಾನ ಸಭಾ ಕ್ಷೇತ್ರದಿಂದ ಅಭ್ಯರ್ಥಿ ನಾನೇ , ಕಾರ್ಯಕರ್ತರ ಕಷ್ಟವನ್ನು ಕೇಳಿ ಎಲ್ಲಾದರೂ ತಪ್ಪಿದ್ದರೆ ಸರಿಪಡಿಸಿಕೊಂಡು ಅಭಿವೃದ್ಧಿ ಮಾಡುತ್ತೇನೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ನಾಯಕನಹಟ್ಟಿ  ಮಂಡಲ ಕಾರ್ಯಾಲಯದಲ್ಲಿ  ಮತ್ತೊಮ್ಮೆ ಮೊಳಕಾಲ್ಮುರು ಕ್ಷೇತ್ರಕ್ಕೆ ಬರುತ್ತೇನೆ ಎಂಬ ಸಂದೇಶ ರವಾನೆ  ಮಾಡಿದ್ದಾರೆ.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಸ್ವರ್ಧೆ ಬಹುತೇಕ ಖಚಿತ ಎಂದು ರಾಜಕೀಯ ವಲಯದಲ್ಲಿ ಗುಸು ಗುಸು ಚರ್ಚೆ ಆರಂಭವಾಗಿರುವ ಬೆನ್ನಲ್ಲೇ ಮೊಳಕಾಲ್ಮುರು ಕ್ಷೇತ್ರ ಬಿಟ್ಟು ಎಲ್ಲೂ ಹೋಗಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಕ್ಷೇತ್ರದಲ್ಲಿ ಎನೇ ಆಗಿದ್ದರು ಸಹ ಎಲ್ಲಾವನ್ನು ಸರಿದೂಗಿಸಿಕೊಂಡು ಕಾರ್ಯಕರ್ತರಿಗೆ ನೋವಾಗದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕೋಟೆನಾಡು ರಾಜಕಾರಣಕ್ಕೆ   ಎಂಟ್ರಿ  ಮಾಡುತ್ತೇನೆ ಎಂದು ತಿಳಿಸಿದ್ದು  ಮುಂದಿನ ರಾಜಕೀಯ ನಡೆ ಕಾದು ನೋಡಬೇಕಿದೆ.

[t4b-ticker]

You May Also Like

More From Author

+ There are no comments

Add yours