ಚಿತ್ರದುರ್ಗ: ನಗರದ ಹೊರವಲಯದಲ್ಲಿ ನಿನ್ನೆ ರಾತ್ರಿ ಭೀಕರವಾದ ದುರಂತ ಅಪ
ಘಾತ ನಡೆದು ಸ್ಥಳದಲ್ಲಿ ಮೂವರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.
ನಗರದ ಹೊಳಲ್ಕೆರೆ ತೆರಳುವ ರಸ್ತೆಯಲ್ಲಿ ಇರುವ ತಿರುಮಲ ಡಾಬಾ ಬಳಿ ಶಿವಮೊಗ್ಗ ಕಡೆಯಿಂದ ಚಿತ್ರದುರ್ಗಕ್ಕೆ ಬರುತ್ತಿದ್ದ ಅಂಬುಲೆನ್ಸ್ ಮತ್ತು ಸ್ಕೂಟಿ ನಡುವೆ ಅಪಘಾತ ನಡೆದಿದೆ. ಈ ಸಂಧರ್ಭದಲ್ಲಿ ಸ್ಕೂಟಿಯಲ್ಲಿದ್ದ 3 ಜನ ಸಹ ಸ್ಥಳದಲ್ಲಿ ಕೊನೆಯುಸಿಳೆದಿದ್ದಾರೆ.
ಯುವಕರು ತ್ರಿಬಲ್ ರೈಡಿಂಗ್ ಹೋಗುತ್ತಿದ್ದರು ಎಂದು ತಿಳಿದಿದ್ದು ಹೆಸರು ಮತ್ತು ಯಾವ ಊರಿನವರು ಎಂಬ ಮಾಹಿತಿ ದೊರಕಿಲ್ಲ. ಗ್ರಾಮಾಂತರ ಪೋಲಿಸ್ ಠಾಣೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
+ There are no comments
Add yours