ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸ್ಥಳದಲೇ ಒಂದೇ ಕುಟುಂಬದ ನಾಲ್ವರ ಸಾವು

 

ಚಿತ್ರದುರ್ಗ,ಮಾ.24: ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ದಂಪತಿ, ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ 9 ಗಂಟೆ ಸುಮಾರಿನಲ್ಲಿ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ದುಮ್ಮಿ ಗ್ರಾಮದ ಬಳಿ ಸಂಭವಿಸಿದೆ.
ಮೃತರನ್ನು ಬಿ.ದುರ್ಗ ಗ್ರಾಮದ ನಾಗರಾಜ್(43), ಪತ್ನಿ ಶೈಲಜಾ(38), ಪುತ್ರರಾದ ವೀರೇಶ್(15) ಹಾಗೂ ಸಂತೋಷ(13) ಎಂದು ಗುರುತಿಸಲಾಗಿದೆ.
ದಾವಣಗೆರೆ‌ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದಲ್ಲಿ ಬುಧವಾರ ಜಾತ್ರೆ ಇದ್ದು, ಈ ಜಾತ್ರೆಗೆ ನಾಗರಾಜ್ ಹಾಗೂ ಕುಟುಂಬ ಒಂದೇ ಬೈಕಿನಲ್ಲಿ ಹೆಬ್ಬಳಗೆರೆ ಗ್ರಾಮಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದೆ.
ರಾತ್ರಿ ಸಂಬಂಧಿಕರ ಮನೆಯಲ್ಲಿ ಊಟ ಮುಗಿಸಿಕೊಂಡು 9 ಗಂಟೆ ಸುಮಾರಿನಲ್ಲಿ ವಾಪಸ್ಸು ತಮ್ಮ ಸ್ವ ಗ್ರಾಮ ಬಿ.ದುರ್ಗಕ್ಕೆ ಒಂದೇ ಬೈಕಿನಲ್ಲಿ ನಾಗರಾಜ್ ಪತ್ನಿ ಶೈಲಜಾ ಹಾಗೂ ಮಕ್ಕಳಾದ ವೀರೇಶ್, ಸಂತೋಷ ಅವರ ಜೊತೆಗೂಡಿ ಹೋಗುವಾಗ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಹೊಳಲ್ಕೆರೆಯಿಂದ ಶಿವಮೊಗ್ಗ ಕಡೆಗೆ ಹೋಗುವ ಖಾಸಗಿ ಬಸ್ಸಿನ ಚಾಲಕ ತನ್ನ ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕಿ ಮುನ್ನುಗ್ಗುವಾಗ ಬಸ್ಸುನ್ನು ಅತೀ ವೇಗವಾಗಿ ಚಲಾಯಿಸಿ ಎದುರುಗಡೆ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಸಿದ್ದಾನೆ ಪರಿಣಾಮ ಬೈಕಿನಲ್ಲಿದ್ದ ನಾಗರಾಜ್ ಪತ್ನಿ ಶೈಲಜಾ ಹಾಗೂ ಮಕ್ಕಳಾದ ವೀರೇಶ್, ಸಂತೋಷ ಅವರುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತ ಸ್ಥಳಕ್ಕೆ ಪೊಲೀಸ್ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಈ ಬಗ್ಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[t4b-ticker]

You May Also Like

More From Author

+ There are no comments

Add yours