ಪಂಚಾಯಿತಿ ಕದನ :ದೊಡ್ಡಉಳ್ಳಾರ್ತಿ ಜಿ.ಪಂ. ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ವರ್ಧೆಗೆ ಯಾದಲಕಟ್ಟೆ ಜಗನ್ನಾಥ್ ಆಕಾಂಕ್ಷಿ

 

ಚಳ್ಳಕೆರೆ: ದೊಡ್ಡ ಉಳ್ಳಾರ್ತಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪ್ರಬಲ ಅಭ್ಯರ್ಥಿಯಾಗಿ ನಾನು ಸ್ಪರ್ಧೆಗೆ ಇಳಿಯುವೆ ಎಂದು ಆಕಾಂಕ್ಷಿ ಯಾದಲಗಟ್ಟೆ ಜಗನ್ನಾಥ ಹೇಳಿದರು.
ಅವರು ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಮೀಸಲಾತಿಯನ್ನು ಅವೈಜ್ಞಾನಿಕವಾಗಿ ರೂಪಿಸುವ ಮೂಲಕ ಎಸ್ಸಿ, ಎಸ್ಟಿಗೆ ಅನ್ಯಾಯವೆಸಗಲಾಗಿದೆ. ಅದರಲ್ಲೂ ಮೀಸಲಾತಿಯನ್ನು ಸ್ಥಳೀಯರಲ್ಲದೆ ಹೊರಗಡೆಯಿಂದ ಬಂದವರು ಸ್ಪರ್ಥಿಸಿ ನಮ್ಮ ಹಕ್ಕನ್ನು ಪಡೆಯುತ್ತಿದ್ದಾರೆ. ಈ‌ಹಿಂದೆ ದೊಡ್ಡ ಉಳ್ಳಾರ್ತಿ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಗೆದ್ದ ಎಲ್ಲರೂ ಹೊರಗೆಯಿಂದ ಬಂದು ಗೆದ್ದವರೇಯಾಗಿದ್ದಾರೆ. ಅವರು ಗೆಲುವುದು ಮಾತ್ರ ಮುಖ್ಯವಾಗಿದ್ದು ಗ್ರಾಮದ ಅಭಿವೃದ್ಧಿ ಅವರಿಗೆ ಬೇಡವಾಗಿದೆ. ಕಳೆದ 30ವರ್ಷಗಳಿಂದ ಈ ಭಾಗದ ಸುಮಾರು ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇಲ್ಲ, ಸೂಕ್ತ ರಸ್ತೆಯೂ ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ. ಪ್ರೌಢಶಾಲೆಗೆ ವಿದ್ಯಾರ್ಥಿಗಳು ಸುಮಾರು ಮೂರ್ನಾಲ್ಕು ಕಿ.ಮೀ ನಡೆದು ಹೋಗುವ ಪರಿಸ್ಥಿತಿ ಇದೆ. ಈ ಬಗ್ಗೆ ಹಲವಾರು ಭಾರಿ ನಾನು ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದುದರಿಂದ ನಾನು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಥಿಸಿ ಜನರ ಸೇವೆ ಮಾಡುವ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಮೊಳಕಾಲ್ಮೂರು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿ.ಒ.ನಾಗೇಶ್ ಬಾಲೇನಹಳ್ಳಿ ಮಂಜುನಾಥ, ‌ಶಿವರಾಜು ಇದ್ದರು.

[t4b-ticker]

You May Also Like

More From Author

+ There are no comments

Add yours