ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದೇನು.

 

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಬೊಮ್ಮಾಯಿ ಮೊದಲ ಮಾತು.

ರಾಜ್ಯದ ಜನ ಬಿಜೆಪಿ ಮೇಲೆ  ಸಾಕಷ್ಟು  ವಿಶ್ವಾಸ, ನಿರೀಕ್ಷೆ ಇಟ್ಟಿದ್ದಾರೆ.  ನಮ್ಮ  ಪಕ್ಷದ ಕೇಂದ್ರ ನಾಯಕರಾದ ಮೋದಿ, ಅಮಿತ್ ಶಾ, ಯಡಿಯೂರಪ್ಪ ನಿರೀಕ್ಷೆ ಇಟ್ಟಿದ್ದಾರೆ ಅದನ್ನು ಈಡೇರಿಸುತ್ತೇನೆ. ಜನರಿಗೋಸ್ಕರ ಜನಪರ ಆಡಳಿತ ನೀಡಿ, ಕರ್ನಾಟಕವನ್ನು ಉನ್ನತ ಮಟ್ಟದ ರಾಜ್ಯವಾಗಿ ರೂಪಿಸುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಸಾರ್ವಜನಿಕರ ಬಡಜನರ ಸಂಕಷ್ಟ, ಪ್ರವಾಹದಿಂದ ತೊಂದರೆಗೆ ಸಿಲುಕಿರುವ ಜನರ ನಿವಾರಣೆ ಮಾಡಲು ಹಗಲಿರುಳು ಕೆಲಸ ನಿರ್ವಹಿಸುತ್ತೇನೆ. ಹಣಕಾಸಿನ ಸ್ಥಿತಿಯನ್ನು ಉತ್ತಮ ಗೊಳಿಸಲು  ಕೆಲಸ ಮಾಡುತ್ತೇನೆ. ಪಕ್ಷದ ವರಿಷ್ಠರು ನನಗೆ  ಯಾವುದೇ ಷರತ್ತು ವಿಧಿಸಿಲ್ಲ. ಪಕ್ಷದ ವರಿಷ್ಠರ ಆಶೀರ್ವಾದವೇ ನನಗೆ ಬಲ. ಜನರ ಸೇವೆಯನ್ನು ಮಾಡಲು ಸಕ್ರಿಯವಾಗಿ ತೊಡಗಿಕೊಳ್ಳುತ್ತೇನೆ. ಪಕ್ಷ, ಶಾಸಕರು, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಸರ್ಕಾರ  ಮತ್ತು ಉತ್ತಮ ಆಡಳಿತ ನೀಡುತ್ತೇನೆ.

[t4b-ticker]

You May Also Like

More From Author

+ There are no comments

Add yours