ಚಿತ್ರದುರ್ಗ ನಗರದ ಬುರುಜನ ಹಟ್ಟಿ ಬಳಿ ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಕದ್ದೊಯ್ದ ಖದೀಮ
ಮಹಿಳೆಯೊಬ್ಬರು ರಸ್ತೆಯಲ್ಕಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಹಿಂಬಾದಿಯಿಂದ ಬಂದ ವ್ಯಕ್ತಿಯೊಬ್ಬ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಚಿತ್ರದುರ್ಗ ನಗರದ ಬುರುಜನಹಟ್ಟಿ ಸಮೀಪ ನಡೆದಿದೆ…
ಇನ್ನೂ ಚಿತ್ರದುರ್ಗ ನಗರದ ಬರಗೇರಮ್ನ ಬೀದಿಯ ಒಂದನೇ ಕ್ರಾಸ್ ನಿವಾಸಿಯಾದ ಸುಮಾ ಎಂಬ ಮಹಿಳೇ ನಿನ್ನೆ ಸಂಜೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಹಿಂಬಾದಿಯಿಂದ ಬಂದ ಕಳ್ಳನೊಬ್ಬ ಮಹಿಳೆಯ ಕೊರಳಲಿದ್ದ ಮಾಂಗಲ್ಯ ಸರಕ್ಕೆ ಎಕಾ ಏಕಿ ಕೈ ಹಾಕಿ ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಮಹಿಳೆ ಮಾಂಗಲ್ಯ ಸರವನ್ನು ಬಿಗಿಯಾಗಿ ಹಿಡಿದುಕೊಂಡ ಪರಿಣಾಮ ಅರ್ಥ ಭಾಗದ ಸರ ಕಿತ್ತುಕೊಂಡು ಒಡಿಹೋಗಿ ಮಂದೆ ಯಾವುದೋ ಬೈಕ್ ನಲ್ಲಿ ಪರಾರಿಯಾಗಿರುವ ಘಟನೆ ಚಿತ್ರದುರ್ಗ ನಗರದ ಬುರುಜನ ಹಟ್ಟಿ ಹಾಗೂ ಸಂಗೊಳ್ಳಿ ರಾಯಣ್ಣ ಸರ್ಕಲ್ ಮಧ್ಯದ ಮಂಜುನಾಥ ಮೆಡಿಕಲ್ಸ್ ಶಾಪ್ ಬಳಿ ನಡೆದಿದೆ…..
ಇನ್ನೂ ಈ ಮಹಿಳೆಯಿಂದ 80 ಸಾವಿರ ಮೌಲ್ಯದ ಸರ ಕದ್ದಿರುವ ಘಟನೆ ನಡೆದಿದೆ…
ಇನ್ನೂ ಈ ಸಂಬಂಧ ಚಿತ್ರದುರ್ಗ ಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ……
[t4b-ticker]
+ There are no comments
Add yours