ಬೆಂಗಳೂರು: ರಾಜಕಾರಣದಲ್ಲಿ ಈಗ ಸಚಿವ ಸಂಪುಟದ ಸದ್ದು ಬಿಜೆಪಿ ಪಕ್ಷದಲ್ಲಿ ಮಹಿಳಾ ಶಾಸಕರಲ್ಲಿ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಈಗ ಮಾಜಿ ಆಗಿದ್ದಾರೆ. ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ರೂಪಾಲಿ ನಾಯಕ್ ಅವರು ಸಚಿವ ಸ್ಥಾನಕ್ಕೆ ಪೈಪೋಟಿಗಿಳಿದ್ದಿದ್ದಾರೆ. ಆದರೆ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮೊಟ್ಟೆ ಹಗರಣದಲ್ಲಿ ಸಿಕ್ಕಿ ಬಿದ್ದಿದ್ದು ಸಚಿವ ಸ್ಥಾನ ಯಾವ ಕಾರಣಕ್ಕೂ ನೀಡುವುದಿಲ್ಲ ಎಂಬ ಮಾತು ರಾಜಕೀಯ ವಲಯದಲ್ಲಿ ಜೋರಾಗಿದೆ. ಜೊತೆಗೆ ರೂಪಾಲಿ ನಾಯಕ್ ಅಥವಾ ಪೂರ್ಣಿಮಾ ಶ್ರೀನಿವಾಸ ಹೆಸರು ಸಕತ್ ಸದ್ದು ಮಾಡುತ್ತಿದ್ದು ಪೂರ್ಣಿಮಾ ಶ್ರೀನಿವಾಸ ಹೆಸರು ಮುಂಚೂಣಿಯಲ್ಲಿದೆ. ಒಂದು ಮಹಿಳಾ ಕೋಟದಲ್ಲಿ ಮತ್ತು ಗೊಲ್ಲ ಸಮುದಾಯದ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ದೃಷ್ಟಿಯಿಂದ ಪೂರ್ಣಿಮಾ ಶ್ರೀನಿವಾಸ ಅವರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಗ್ಯಾರೆಂಟಿ ಎಂಬ ಮಾತು ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಎಲ್ಲಾದಕ್ಕೂ ಕೇಂದ್ರ ನಾಯಕರು ಮತ್ತು ಸಿಎಂ ಯಾರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಾರೆ ಎಂಬುದು ಕುತೂಹಲವಾಗಿದೆ.
[t4b-ticker]
+ There are no comments
Add yours