ಚಳ್ಳಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಜಿ.ಟಿ.ವೀರಭದ್ರಸ್ವಾಮಿ ಆಯ್ಕೆ

 

ಚಳ್ಳಕೆರೆ- ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷರಾಗಿ ಜಿ.ಟಿ.ವೀರಭದ್ರಸ್ವಾಮಿ ಸರ್ವಾನುಮತದಿಂದ ಆಯ್ಕೆಯಾದರು.‌ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಗೆ ಶಿಕ್ಷಕ ಕೆ.ಎ.ಮೂರ್ತಪ್ಪ, ಛಾಯಾಗ್ರಾಹಕ ನಿಸರ್ಗಗೋವಿಂದರಾಜು, ವಿಶ್ವಭಾರತಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಜಿ.ಟಿ.ವೀರಭದ್ರಪ್ಪ ಅಧ್ಯಕ್ಷ ಸ್ಥಾನದ ಆಸಕ್ತರಾಗಿದ್ದರು. ಕೊನೆಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ ಮೂವರು ಆಸಕ್ತರೊಂದಿಗೆ ಚರ್ಚೆ ನಡೆಸಿ ಕೊನೆಗೆ ಸರ್ವಾನುಮತದ ಒಪ್ಪಿಗೆಯಿಂದ ಜಿ.ಟಿ.ವೀರಭದ್ರಸ್ವಾಮಿರವರನ್ನು ಚಳ್ಳಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಭೇಟಿ ಮಾಡಿ ಶುಭ ಹಾರೈಸಲಾಯಿತು.

[t4b-ticker]

You May Also Like

More From Author

+ There are no comments

Add yours