ಚಿತ್ರದುರ್ಗ : ಇಂದ ನೂತನ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ನೇರಲಗುಂಟೆ ರಾಮಪ್ಪ ಅವರು ಇಂದು ಚಿತ್ರದುರ್ಗ ಐತಿಹಾಸಿಕ ಮುರುಘಾಮಠಕ್ಕೆ ಭೇಟಿ ನೀಡಿ ಮುರಾಘಾ ಶರಣರ ಆಶೀರ್ವಾದ ಪಡೆದರು.. ನಂತರ ಕಬೀರನಾಂದ ಆಶ್ರಮದ ಬಸವಲಿಂಗಸ್ವಾಮಿಗಳನ್ನು ಹಾಗೂ ಯಾದವ್ ಗುರುಪೀಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ ಯಾದವನಾಂದ ಸ್ವಾಮಿಗಳ ಭೇಟಿ ಮಾಡಿ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ನ್ಯೂಸ್ 19 ಕನ್ನಡ ಜೊತೆ ಮಾತನಾಡಿ ಮಾತನಾಡಿದ ರಾಮಪ್ಪ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತರಲು ಎಲ್ಲಾ ರೀತಿಯಿಂದ ಶ್ರಮಿಸುತ್ತೇನೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಚಾಚು ತಪ್ಪದೇ ಪಾಲಿಸಿ ಗೆಲುವು ಸಾಧಿಸಿ ದಡ ಮುಟ್ಟಲು ಕೆಲಸ ಮಾಡುತ್ತೇನೆ. ಸಾಮಾನ್ಯ ಕಾರ್ಯಕರ್ತನನ್ಮು ಗುರುತಿಸಿ ಪಕ್ಷ ಜವಬ್ದಾರಿ ನೀಡಿರುವುದು ಸಂತೋಷ ತಂದಿದೆ ಎಲ್ಲಾರ ಮಾರ್ಗದರ್ಶನದಲ್ಲಿ ಪಕ್ಷದಲ್ಲಿ ನಡೆಯುತ್ತೇನೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್ ಪೀರ್, ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಹಾಲೇಶ್, ಗ್ರಾಜೆಟ್ ಅನ್ ಮುದಸಿರ್, ಹಿಂದುಳಿದ ವರ್ಗಗಳ ಎನ್.ಡಿ.ಕುಮಾರ್, ನಿವೃತ್ತ ಪ್ರಾಂಶುಒಅಲರಾದ ಕನಕದಾಸ್ ಇದ್ದರು.
[t4b-ticker]
+ There are no comments
Add yours