ಭರಮಸಾಗರ ಠಾಣಾ ವ್ಯಾಪ್ತಿಯಲ್ಲಿ ಇಸಮುದ್ರ ಗ್ರಾಮದ ಕು.ಶಶಿಕಲಾ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಪ್ರತಿಭಟಿಸಿದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಯುವಕರ ಫೌಂಡೇಶನ್ ಆರೋಪಿಯನ್ನು ಮನೋವೈಕಲ್ಯ ಎಂದು ಬಿಂಬಸದೆ, ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿವೆ.
ಆರೋಪಿಯನ್ನು ಮಾನಸಿಕ ಅಸ್ತವ್ಯಸ್ತ ಎಂದು ಬಿಂಬಸದೆ ಕಠಿಣ ಶಿಕ್ಷೆ ಒಳಪಡಿಸಬೇಕು, ಇಂತಹ ದುರ್ಘಟನೆಗಳು ಕನಸುಮನಸಿನಲ್ಲಿ ವಿಕೃತ ಮನಸ್ಸುಗಳು ಯೋಚಿಸದಂತೆ ಕಠಿಣ ಸಂದೇಶ ರವಾನಿಸಬೇಕು. ಅತ್ಯಾಚಾರ ಆರೋಪಿಗಳನ್ನು ನೇರ ಗಲ್ಲು ಶಿಕ್ಷೆಗೆ ವಿಧಿಸಬೇಕೆಂದು ಆಗ್ರಹಿಸಿದರು.
ಮೇದೆಹಳ್ಳಿಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರಿಗೆ ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ಆಗ್ರಹಪತ್ರ ನೀಡಿದರು. ನಂತರ ಬಾಲಕಿಯ ಗ್ರಾಮಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ತಿಳಿಸಿ ದವಸದಾನ್ಯ ವಿತರಿಸಿದರು.
ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಫೌಂಡೇಶನ್ ವತಿಯಿಂದ ತಿಪ್ಪೇಸ್ವಾಮಿ, ಓಂಕಾರಪ್ಪ, ಯೋಗೇಶ್, ತಿಮ್ಮೇಶ,ವೆಂಕಟೇಶ್ ಹೆಚ್, ಪುರುಷೋತ್ತಮ, ಗೋವಿಂದರಾಜ, ದುಗ್ಗಪ್ಪ, ಶ್ರೀನಿವಾಸ್. ಹೆಚ್, ಸಂಜೀವಮೂರ್ತಿ, ಚನ್ನವಿರಪ್ಪ, ಮಾರೇಶ್, ದೇವರಾಜ್, ಮಾರುತಿ, ಶಿವಮೂರ್ತಿ ಇನ್ನಿತರರು ಉಪಸ್ಥಿತಿಯಿದ್ದರು.
[t4b-ticker]
+ There are no comments
Add yours