ಚಿತ್ರದುರ್ಗ: ನಗರದ ಕಾಮನಬಾವಿ ಬಡವಾಣೆಯಲ್ಕಿ ತಾಯಿಗೆ ಬೈದ ಅಂತ ಗೆಳೆಯನನ್ನೆ ಕೊಲೆಗೈದ ಸ್ನೇಹಿತ
ಕುಡಿದ ಅಮಲಿನಲ್ಕಿ ಸ್ನೇಹಿತರಿಬ್ಬರ ನಡುವೆ ಹಣಕಾಸು ವಿಚಾರದಲ್ಲಿ ಗಲಾಟೆಯಾಗಿದ್ದು ಈ ಗಲಾಟೆಯಲ್ಲಿ ಮಹಮದ್ ಆಲಿ ಎಂಬ ವ್ಯಕ್ತಿ ಸ್ನೇಹಿತನ ತಾಯಿಗೆ ಬೈದಿದ್ದಾನೆ.. ಇದರಿಂದ. ಆಕ್ರೋಶಗೊಂಡ ಗೆಳೆಯ ಖಾದರ್ ಭಾಷ ಸ್ನೇಹಿತ ಮಹಮದ್ ಆಲಿಯ ಹೊಟ್ಟೆಯ ಭಾಗಕ್ಕೆ ಗುದ್ದಿ ಕೊಲೆ ಮಾಡಿರುವಂತಹ ಘಟನೆ ಚಿತ್ರದುರ್ಗ ನಗರದ ಕಾಮನಬಾವಿ ಬಡಾವಣೆಯಲ್ಲಿ ನಡೆದಿದೆ.
ಇನ್ನೂ ಈ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಮಹಮದ್ ಆಲಿ ಎಂದು ಗುರುತಿಸಲಾಗಿದೆ….
ಇನ್ನೂ ಇಬರಿಬ್ಬರು ಗಾರೆಕೆಲಸ ಮಾಡಿಕೊಂಡಿದ್ದು ಕಳೆದ ಎರಡು ದಿನಗಳ ಹಿಂದೆ ಗಾರೆ ಕೆಲಸ ಮುಗಿಸಿಕೊಂಡು ಇಬ್ಬರು ಕುಡಿದು ಬಂದಿದ್ದಾರೆ…ಇನ್ನೂ ಕುಡಿದ ಮತ್ತಿನಲ್ಕಿ ಇಬ್ಬರ ನಡುವೆ ಹಣಕಾಸು ವಿಚಾರದಲ್ಲಿ ಗಲಾಟೆಯಾಗಿದ್ದು. ಕುಡಿದ ಅಮಲಿನಲ್ಲಿ ಮಹಮದ್ ಆಲಿ ಖಾದರ್ ಬಾಷಾನ ತಾಯಿಗೆ ಬೈದಿದ್ದಾನೆ ಇದರಿಂದ ಅಕ್ರೊಶಗೊಂಡ ಖಾದರ್ ಬಾಷ ಗೆಳೆಯ ಮಹಮದ್ ಅಲಿಯ ಹೊಟ್ಟೆಯ ಭಾಗಕ್ಕೆ ಗುದ್ದಿದ್ದಾನೆ…
ಇನ್ನೂ ಗುದ್ದಿದ ಜಾಗದಲ್ಲಿ ತುಂಬಾ ನೊವಿದ್ದರಿಂದ ಚಿಕಿತ್ಸೆ ಆಸ್ಪತ್ರೆಗೆ ದಾಖಲಾಗಿದ್ದು ಅಲ್ಲಿಯೇ ಎಂ.ಎಲ್. ಸಿ ದೂರು ದಾಖಲಿಸಿ ಚಿಕಿತ್ಸೆಗೆ ದಾಖಲಾಗಿದ್ದ ಆದರೆ ಮಹಮದ್ ಆಲಿ ತಡರಾತ್ರಿ ಚಿಕಿತ್ಸೆಗೆ ಸ್ಫಂದಿಸದೇ ಅಸುನಿಗಿದ್ದಾನೆ.
ಇನ್ನೂ ಕೊಲೆ ಮಾಡಿ ಪಾರರಿಯಾಗಿದ್ದ ವ್ಯಕ್ತಿಯನ್ನು ಚಿತ್ರದುರ್ಗ ನಗರ ಠಾಣಾ ಪೊಲಿಸರು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.
[t4b-ticker]
+ There are no comments
Add yours