ಚಳ್ಳಕೆರೆ-14: ಜನರ ಸಂಕಷ್ಟಗಳಿಗೆ ಸಂಘ, ಸಂಸ್ಥೆಗಳು ಸಹಾಯಹಸ್ತ ಚಾಚಬೇಕು ಎಂದು ಶಾಸಕ ಟಿ.ರಘುಮೂರ್ತಿ ಕರೆ ನೀಡಿದರು.
ಇಲ್ಲಿನ ರೋಟರಿ ಕ್ಲಬ್ ನಲ್ಲಿ ಆಯೋಜಿಸಿದ್ದ ಲಸಿಕೆ ಹಾಕುವ ಮತ್ತು ಆಹಾರ ಪೊಟ್ಟಣಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆ ವತಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಸುಮಾರು 300 ಕುಟುಂಬಗಳಿಗೆ ಆಹಾರ ಕಿಟ್ ಮತ್ತು ಸಾರ್ವಜನಿಕ ಆಸ್ಪತ್ರೆಗೆ 10 ಆಕ್ಸಿಜನ್ ಫ್ಲೋಮೀಟರ್ ವಿತರಿಸಿದ್ದಾರೆ. ಅವರ ಸಾಮಾಜಿಕ ಕಳಕಳಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಧರ್ಮಸ್ಥಳ ಸಂಸ್ಥೆಯ ಡಾ ವೀರೇಂದ್ರ ಹೆಗ್ಗೆಡೆಯವರು ಬಡವರಿಗೆ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ದನಿಯಾಗಿ ಕೆಲಸ ಮಾಡುತ್ತಿದ್ದು , ಕೊರೊನ ಸಂಕಷ್ಟದ ಸಮಯದಲ್ಲಿ ನಿರ್ಗತಿಕರಿಗೆ ಹೆಚ್ಚಿನ ಸೇವೆ ಕೊಡುವಲ್ಲಿ ಶ್ರಮಿಸಿದ್ದಾರೆ.
ಮಾನ್ಯ ಜಿಲ್ಲಾ ನಿರ್ದೇಶಕರು ಜನಾರ್ದನ, ನಗರಸಭಾ ಅಧ್ಯಕ್ಷರು ಜಯಲಕ್ಷ್ಮಿ ಕೃಷ್ಣ ಮೂರ್ತಿ, ಮುಖ್ಯ ವೈದ್ಯಧಿಕಾರಿ ವೆಂಕಟೇಶ, ಡಾ ತಿಪ್ಪೇಸ್ವಾಮಿ, ರೋಟರಿ ಕ್ಲಬ್ ಪ್ರೆಸಿಡೆಂಟ್ ಗೌರವ ಅಧ್ಯಕ್ಷ ಡಾ. ಜಯಕುಮಾರ, ಅಧ್ಯಕ್ಷ ಕೆ.ನಾಗೇಶ್, ರೋಟರಿ ಡೈರೆಕ್ಟರ್ ಸಂಜಯ ಜೈನ ಉಪಸ್ಥಿತರಿದ್ದರು
+ There are no comments
Add yours