ದಾವಣಗೆರೆ: ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಹಸ್ಯ ಭೇಟಿ ಆಗಿದ್ದಾರೆಂಬುದು ಬಹಳ ದೊಡ್ಡ ಸುದ್ದಿಯಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಮನೂರು, ನಾನು ಬಸವರಾಜ ಬೊಮ್ಮಾಯಿ ಅವರು ಬೀಗರು. ಚುನಾವಣೆ ಆದಾಗಿನಿಂದ ಭೇಟಿಯಾಗಿರಲಿಲ್ಲ. ಇಬ್ಬರೂ ಗೆದ್ದಿರುವುದಕ್ಕೆ ಈಗ ಭೇಟಿಯಾಗಿದ್ದೇವೆ ಅಷ್ಟೇ. ನಾನು ಕಾಂಗ್ರೆಸ್ ಆದರೆ, ಅವರು ಬಿಜೆಪಿ. ನಮ್ಮಿಬ್ಬರ ನಡುವೆ ಏನು ಮಾತುಕತೆ ನಡೆಯಬಹುದು ಹೇಳಿ ಎಂದು ಹೇಳುವ ಮೂಲಕ ಇದು ಯಾವುದೇ ರಾಜಕೀಯ ಭೇಟಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೈಲೈಟ್ಸ್:
ಬಸವರಾಜ ಬೊಮ್ಮಾಯಿ ಜೊತೆಗಿನ ರಹಸ್ಯ ಭೇಟಿ ಬಗ್ಗೆ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ
ನಾವಿಬ್ಬರೂ ಸಂಬಂಧಿಕರು, ವಿಧಾನಸಭೆ ಚುನಾವಣೆ ಆದಾಗಿನಿಂದ ಭೇಟಿಯಾಗಿರಲಿಲ್ಲ
ಇದೊಂದು ಸೌಹಾರ್ದಯುತ ಭೇಟಿಯಷ್ಟೇ, ಇದರಲ್ಲಿ ಯಾವುದೇ ರಾಜಕೀಯ ಇಲ್ಲ
+ There are no comments
Add yours