ಚಳ್ಳಕೆರೆ: ಭವ್ಯ ಭಾರತದ ಪ್ರಬುದ್ಧ ಸಂವಿಧಾನದ ಮೂಲ ಆಶಯ ಮತದಾನ , ಈ ಮತದಾನ ಪರಿಪೂರ್ಣವಾಗಬೇಕಾದಲ್ಲಿ ಮತದಾನ ಪಟ್ಟಿಯ ಪರಿಷ್ಕರಣೆ ದೋಷರಹಿತವಾಗಿ ಮತ್ತು ಯಾವುದೇ ಮತದಾರರನ್ನು ಕೈ ಬಿಡದಂತೆ ಮಾಡಬೇಕಾಗಿರುತ್ತದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು.
ಇಂದು ಸೋಮ ಗುದ್ದು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೧೮ ವರ್ಷ ತುಂಬಿದ ಕಾಲೇಜು ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿಗೆ ಸೇರಿಸುವ ವಿಶೇಷ ಆಂದೋಲನದ ಕಾರ್ಯಕ್ರಮದಲ್ಲಿ ಮಾತನಾಡಿ 18 ವರ್ಷ ತುಂಬಿರುವಂತಹ ಎಲ್ಲಾ ಯುವಕ ಯುವತಿಯರು ತಮ್ಮ ಕುಟುಂಬದವರು ಇರುವಂತಹ ಮತಗಟ್ಟೆಯಲ್ಲಿ ಅವರ ಹೆಸರುಗಳನ್ನು ನೋಂದಾವಣೆ ಮಾಡಿಕೊಳ್ಳಬೇಕು. ಇದರ ಮುಖಾಂತರ ಆದರ್ಶ ನಾಗರಿಕರಾಗಬೇಕೆಂದು ಎಂದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಕ್ಷೇತ್ರದ ಯಾವುದೇ 18 ವರ್ಷ ತುಂಬಿದ ಕಾಲೇಜು ವಿದ್ಯಾರ್ಥಿಗಳ ಮತದಾರರ ಪಟ್ಟಿಯಿಂದ ಹೊರಗೂಳಿಯದಂತೆ ಈ ವಯೋಮಾನದ ಎಲ್ಲರೂ ಕೂಡ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳುವಂತೆ ದೋಷ ರಹಿತ ಮತದಾರರ ಪಟ್ಟಿಯನ್ನು ತಯಾರಿಸಲು ಎಲ್ಲ ಸರ್ಕಾರಿ ಅಧಿಕಾರಿ ನೌಕರರು ಇಂದು ಸಂಕಲ್ಪವನ್ನು ಮಾಡಿ ದೀಕ್ಷೆ ಪಡೆಯೋಣವೆಂದು ವಿದ್ಯಾರ್ಥಿಗಳು ಮತ್ತು ಅಧಿಕಾರಿ ನೌಕರರೊಂದಿಗೆ ಪ್ರತಿಜ್ಞಾವಿಧಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ,ನಗರಸಭೆಯ ಆಯುಕ್ತ ಚಂದ್ರಪ್ಪ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
[t4b-ticker]
+ There are no comments
Add yours