ಮೈನ್ಸ್ ಲಾರಿಗಳಿಗೆ ನಗರ ಪ್ರವೇಶ ನಿರ್ಬಂಧ: ಡಿಸಿ ಆದೇಶ

 

 

 

 

ಚಿತ್ರದುರ್ಗ ( ಕರ್ನಾಟಕ ವಾರ್ತೆ) ಜುಲೈ 30 :
ಚಿತ್ರದುರ್ಗ ನಗರದಲ್ಲಿ ಸುಗಮ ಸಂಚಾರಕ್ಕಾಗಿ ಮತ್ತು ರಸ್ತೆ ಸಂಚಾರ ನಿಯಂತ್ರಣಕ್ಕೆ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಕಬ್ಬಿಣದ ಅದಿರು ಸಾಗಿಸುವ ಮೈನ್ಸ್ ಲಾರಿಗಳು ನಗರದ ಒಳಗಡೆ ಸಂಚರಿಸದಂತೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.
ಸಾರ್ವಜನಿಕ ಸುಗಮ ಸಂಚಾರ ಕ್ರಮಗೊಳಿಸುವ ದೃಷ್ಟಿಯಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮೈನ್ಸ್ ಲಾರಿಗಳು ಚಿತ್ರದುರ್ಗ ನಗರದ ಒಳಗಡೆ ಸಂಚರಿಸದಂತೆ ನಿರ್ಬಂಧಿಸಲಾಗಿದೆ.
ಭೀಮಸಮುದ್ರ ರಸ್ತೆಯಿಂದ ಬರುವ ಕಬ್ಬಿಣದ ಅದಿರು ಸಾಗಿಸುವ ಮೈನ್ಸ್ ಲಾರಿಗಳು ರಾಷ್ಟ್ರೀಯ ಹೆದ್ದಾರಿ-50(ಎ) ಬೈಪಾಸ್ ಬಂದು ಅಲ್ಲಿಂದ ಮುರುಘಾಮಠ ಕ್ರಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ 48 ಸೇರಿ, ಅಲ್ಲಿಂದ ಸೀಬಾರ ಕಡೆಗೆ ತಿರುಗಿ, ಸೀಬಾರ ಕ್ರಾಸ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ 48 ಬೈಪಾಸ್‍ಗೆ ಸೇರುವುದು ಹಾಗೂ ಭೀಮಸಮುದ್ರ ಕಡೆಯಿಂದ ಬರುವ ಮೈನ್ಸ್ ಲಾರಿಗಳು ಯಾವುದೇ ಕಾರಣಕ್ಕೂ ಭೀಮಸಮುದ್ರ ರಸ್ತೆ, ಹೊಳಲ್ಕೆರೆ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ-48ರ ಹಳೇ ಬೈಪಾಸ್ ಮೂಲಕ ಚಿತ್ರದುರ್ಗ ನಗರವನ್ನು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪ್ರವೇಶಿಸದಂತೆ ನಿರ್ಬಂಧಲಾಗಿದೆ ಎಂದು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಆದೇಶಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours