ಪೋಲಿಸ್ ವೇಶದಲ್ಲಿ ಬಂದು 2.5 ಲಕ್ಷದ ಚಿನ್ನ ಕದ್ದ ಇಬ್ಬರು ಕಳ್ಳರು

 

ಚಿತ್ರದುರ್ಗ: ಪೊಲೀಸರ  ವೇಶದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಅಸಾಮಿಗಳಿಂದ 2.5 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಟಿ. ನುಲೇನೂರು ಗ್ರಾಮದ ಬಳಿಯಲ್ಲಿ  ಈ ಘಟನೆ ನಡೆದಿದೆ. ಅನ್ನೇಹಾಳ್ ಗ್ರಾಮದ ವಿಶ್ವನಾಥ್ ದಂಪತಿಗಳಿಂದ ಈ ಸುಲಿಗೆ ಮಾಡಿದ್ದಾರೆ. ಬೈಕ್ ನಲ್ಲಿ ದಂಪತಿಗಳು ಚಿತ್ರದುರ್ಗಕ್ಕೆ ತೆರಳುವಾಗ ಬೈಕ್ ಅಡ್ಡಗಟ್ಟಿದ್ದು, ನಾವು ಪೊಲೀಸರು ಎಂದು ನಂಬಿಸಿ ಬೈಕ್ ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದೀಯಾ ಎಂದು ಪರಿಶೀಲನೆ ಮಾಡುವ ನೆಪದಲ್ಲಿ ಚಿನ್ನಾಭರಣ ದೋಚಿದ್ದಾರೆ. 40 ಗ್ರಾಂ ತೂಕದ ಮಾಂಗಲ್ಯ ಸರ, 13 ಗ್ರಾಂ ಒಂದು ಉಂಗುರ, 10 ಗ್ರಾಂ ಒಂದು ಉಂಗುರ ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೊಳಲ್ಕೆರೆ ಸಿಪಿಐ ರವೀಶ್, ಚಿತ್ರಹಳ್ಳಿ ಪಿಎಸ್ಐ ಆಶಾ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಚಿತ್ರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

[t4b-ticker]

You May Also Like

More From Author

+ There are no comments

Add yours