ಚಿತ್ರದುರ್ಗ: ಮೊಳಕಾಲ್ಮುರು ಬಿಜೆಯಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ ಸೇರ್ಪಡೆಯಿಂದ ರಾಜಕೀಯ ಚಿತ್ರಣ ಬದಲಾಗಿದ್ದು ತಿಪ್ಪೇಸ್ವಾಮಿ ವಿರೋಧಿಗಳ ಕಥೆ ಏನು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ಮೊಳಕಾಲ್ಮುರು ಜೆಡಿಎಸ್ ಪಕ್ಷದಲ್ಲಿದ್ದ ಯತ್ನಟ್ಟಿ ಗೌಡ ಪಟೇಲ್ ತಿಪ್ಪೇಸ್ವಾಮಿ ಅವರನ್ನು ಬಿಜೆಪಿ ಸೇರ್ಪಡೆ ಮಾಡಿಕೊಂಡಿದ್ದಾರೆ. ಇವರು ಮಾಜಿ ಶಾಸಕ ತಿಪ್ಪೇಸ್ವಾಮಿ ವಿರೋಧಿಯಾಗಿದ್ದಾರೆ. ಗೌಡರ ಮಗ ದೇವರಾಜ್ ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಪ್ರಭಾಕರದ ಮ್ಯಾಸ ನಾಯಕ, ಶಶಿಕುಮಾರ್, ಮಾಜಿ ಸಂಸದ ಎನ್.ವೈ.ಹನುಮಂತಪ್ಪ ಪುತ್ರ ಎನ್.ವೈ ಸುಜಯ್ ಟಿಕೆಟ್ ನೀಡುತ್ತಾರೆ ಎಂಬ ಮಾತು ಕ್ಷೇತ್ರದಲ್ಲಿ ಇದೆ. ಏಕೆಂದರೆ ಎನ್.ವೈ ಫ್ಯಾಮಿಲಿಯವರ ಹಿಡಿದ ಮೊಳಕಾಲ್ಮುರು ಕ್ಷೇತ್ರದಲ್ಲಿ ಸಾಕಷ್ಟು ಇದೆ. ಈ ಎಲ್ಲಾ ಬೆಳವಣಿಗೆಯ ನಡುವೆ ಯಾರಿಗೆ ಬಿಜೆಪಿ ಮಣೆ ಹಾಕುತ್ತದೆ ಎಂಬುದು ಕಾದು ನೋಡಬೇಕಿದೆ.
[t4b-ticker]
+ There are no comments
Add yours