ಎತ್ತಿಕೊಂಡು ಬಂದು ಪತ್ನಿಗೆ ದೇವಿಯ ದರ್ಶನ ಮಾಡಿಸಿದ ಪತಿ
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಬೀಚೇನಹಳ್ಳಿ ಗ್ರಾಮದ ನಿವಾಸಿ ನಾಗರಾಜ್ ಎನ್ನುವವರು ತನ್ನ ಪತ್ನಿ ಗೌರಮ್ಮ ಅವರ ಆಸೆಯನ್ನು ಈಡೇರಿಸಿದ್ದಾರೆ. ವಿಕಲಚೇತನ ಪತ್ನಿಯ ಆಸೆಯಂತೆ ನಾಗರಾಜ್ ಗೌರಮ್ಮ ಅವರನ್ನು ಎತ್ತಕೊಂಡು ಹೋಗಿ ಹಾಸನಾಂಬೆಯ ದರ್ಶನ ಮಾಡಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಕೂಡ ಮಾನವೀಯತೆ ಮೆರೆದಿದ್ದು, ನಾಗರಾಜ್ ಅವರಿಗೆ ನೆರವಾಗಿದ್ದಾರೆ. ಇನ್ನು ಗೌರಮ್ಮ ಅವರ ಭಕ್ತಿ ಹಾಗೂ ನಾಗರಾಜ್ ಅವರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
[t4b-ticker]
+ There are no comments
Add yours