ಜಗತ್ತಿನಲ್ಲಿ ದಾದಿಯರ ಸೇವೆಯೇ ಶ್ರೇಷ್ಠ ಸೇವೆ: ತಹಶೀಲ್ದಾರ್ ಎನ್.ರಘುಮೂರ್ತಿ

 

ಚಿತ್ರದುರ್ಗ:  ಗೌರವ ಪ್ರತಿಷ್ಠೆ ಮತ್ತು ಸಿರಿತನವನ್ನು ಮೀರಿ ಸಾರ್ವಜನಿಕ ಸೇವೆಯನ್ನು ಮಾಡಿದರೆ ನಮ್ಮ ಹೆಸರು ಅಜಾರಮಾರವಾಗಿರುತ್ತದೆ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.

ಇಂದು ಚಳ್ಳಕೆರೆ ತಾಲೂಕು  ಸಾರ್ವಜನಿಕ ಆಸ್ಪತ್ರೆಯಲ್ಲಿ ದಾದಿಯರು ಏರ್ಪಡಿಸಿದ್ದ   ವಿಶ್ವ ದಾದಿಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.

1820ರಲ್ಲಿ ಜನಿಸಿದ ಫ್ಲಾರೆನ್ಸ್ ನೈಟಿಂಗೇಲ್ ಅವರು ತಮ್ಮ ಮನೆತನ ಅತ್ಯಂತ ಶ್ರೀಮಂತ ಕುಟುಂಬವಿದ್ದರೂ ವಿಲಾಸಿ ಜೀವನವನ್ನು ದೂರ ಮಾಡಿ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡು ರೋಗಿಗಳನ್ನು ಅಮಾನುಷವಾಗಿ ಕಾಣುತ್ತಿದ್ದಂತ  ಮಿಲಿಟರಿ ಆಸ್ಪತ್ರೆಯಲ್ಲಿ ಎಲ್ಲ ಗಾಯಾಳುಗಳಿಗೆ ದೇವರ ರೂಪದಲ್ಲಿ ಸೇವೆ ಮಾಡಿ ಪ್ರತಿಯೊಬ್ಬ ಗಾಯಾಳುಗಳ ಪಾಲಿಗೆ ದೀಪದಾರಿಣಿಯಾಗಿ ಗೋಚರಿಸಿದರು ಸಮರ್ಪಣಾ ಮನೋಭಾವವಿರುವ ಅವರು ಅವರು ಕಾಲವಾದರು ಕೂಡ ಇಂದಿಗೂ ನಮ್ಮಗಳ ಮನಸ್ಸಿನಲ್ಲಿ ಜೀವಂತವಾಗಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲಿ ತಮ್ಮದೇ ಕೆಲಸ ಕಾರ್ಯಗಳಿಂದ ಸೇವಾ ಮನೋಭಾವನೆಯಿಂದ ಜಗತ್ತಿಗೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ. ಅದರಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮಾನವೀಯ ನೆಲೆಯಲ್ಲಿ ಆಸ್ಪತ್ರೆಗೆ ಬರುವಂತ ರೋಗಿಗಳಿಗೆ ತಾಯಿ ಹೃದಯದಿಂದ ಅವರುಗಳನ್ನು ಆದರಿಸಿ ಸೇವೆಮಾಡುವಂತ ಅನಿವಾರ್ಯತೆ ಮತ್ತು ಅವಶ್ಯಕತೆಯಿದ್ದು ಚಳ್ಳಕೆರೆಯಂತ ತಾಲೂಕಿನಲ್ಲಿ ಈ ರೀತಿ ಸೇವೆಯನ್ನು ಮಾಡಿದರೆ ಜನ ಎಂದು ಕೂಡ ತಮ್ಮನ್ನು ಪೂಜಿಸುತ್ತಾರೆ.

ಕೋವಿಡ್ ಸಮಯದಲ್ಲಿ ತಾವುಗಳು ಸಲ್ಲಿಸಿದ ಸೇವೆ ಅವಿಸ್ಮರಣೀಯ ಈ ಶತಮಾನದಲ್ಲಿ ಈ ಒಂದು ಸೇವೆಯನ್ನು ಮಾಡಲು ನಮ್ಮೆಲ್ಲರಿಗೂ ಕೂಡ ಅವಕಾಶ ಒದಗಿದೆ ಈ ಅವಕಾಶವನ್ನು ಉಪಯೋಗಿಸಿಕೊಂಡು ತಾಲೂಕಾಡಳಿತ ಶೇಕಡ 108 ರಷ್ಟು ವ್ಯಾಕ್ಸಿನ್ ಕಾರ್ಯ ಪೂರ್ಣ ಬೆಳೆಸಿದ್ದೇವೆ ತಾಲೂಕಿನ ಸಮಸ್ತ ಜನರ ಪ್ರಾಣವನ್ನು ಉಳಿಸಿ ನಿರಾತಂಕದಿಂದ ನಾವುಗಳು ಇದ್ದೇವೆ ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಇನ್ನು ಉತ್ತಮ ಸೇವೆಯ ಮಾಡಲು ಎಲ್ಲರಿಗೂ ಆತ್ಮಸ್ಥೈರ್ಯ ದಯಾ ಪಾಲಿಸಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ಸಾರ್ವಜನಿಕ ಆಸ್ಪತ್ರೆ ಆಡಳಿತ ಆಡಳಿತಾಧಿಕಾರಿ ಡಾಕ್ಟರ್ ವೆಂಕಟೇಶ್ ಮಾತನಾಡಿ ಆಸ್ಪತ್ರೆಯ ವಿವಿಧ ಸೇವೆಗಳನ್ನು ಕಾಲಕಾಲಕ್ಕೆ ಪೂರೈಸಿ ಸಾರ್ವಜನಿಕ ಆಸ್ಪತ್ರೆ ರಾಜ್ಯಕ್ಕೆ ಸ್ಥಾನದಲ್ಲಿದೆ ಜೊತೆಗೆ ಮುಂದೆಯೂ ಕೂಡ ಆಸ್ಪತ್ರೆಯ ಘನತೆ ಗೌರವವನ್ನು ಸಿಬ್ಬಂದಿಯು ಪೂರೈಸಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸಲೆಂದು ಮನವಿ ಮಾಡಿದರು ಸಮಾರಂಭದಲ್ಲಿ ಮಕ್ಕಳ ತಜ್ಞರಾದ ತಿಪ್ಪೇಸ್ವಾಮಿ ಸಹಯ ಕ ಆರೋಗ್ಯ ಅಧಿಕಾರಿ ತಿಪ್ಪೇಸ್ವಾಮಿ ವಿಜಯ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

[t4b-ticker]

You May Also Like

More From Author

+ There are no comments

Add yours