ಜಿಯಾಲಾಜಿಸ್ಟ್ ಹುದ್ದೆಗೆ ಭರ್ತಿಗೆ ಕ್ರಮ ವಹಿಸಿ: ಜಿಲ್ಲೆಯ ಆರು ತಾಲ್ಲೂಕುಗಳನ್ನು ಒಳಗೊಂಡಂತೆ ಕೇವಲ ಒಬ್ಬರೇ ಜಿಯಾಲಾಜಿಸ್ಟ್ ಇದ್ದಾರೆ. ಬೇಸಿಗೆ ಕಾಲವಾಗಿರುವುದರಿಂದ, ವಿವಿಧೆಡೆ ಹೊಸ ಬೋರ್ವೆಲ್ ಕೊರೆಯಿಸಬೇಕಾಗುತ್ತದೆ, ಹೀಗಾಗಿ ತುರ್ತಾಗಿ ನೀರಿನ ಪಾಯಿಂಟ್ ಮಾಡಬೇಕಾಗುತ್ತದೆ. ಆದರೆ ಜಿಲ್ಲೆಯಲ್ಲಿ ಜಿಯಾಲಾಜಿಸ್ಟ್ ಕೊರತೆ ಇದ್ದು, ಎರಡು ತಾಲ್ಲೂಕಿಗೆ ಒಬ್ಬರಂತೆ ಕನಿಷ್ಟ ಮೂರು ಮಂದಿ ಜಿಯಾಲಾಜಿಸ್ಟ್ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವಂತೆ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದನ್ನೂ ಓದಿ: ಒಂದು ವಾರದಲ್ಲಿ ರಾಗಿ ಖರೀದಿ ಕೇಂದ್ರ ಆರಂಭ
[t4b-ticker]
+ There are no comments
Add yours