ತುಮಕೂರು :ಲಂಚ ಪಡೆದ ಉಪ ವಿಭಾಗಾಧಿಕಾರಿ ಜೈಲು ಶಿಕ್ಷೆ- ದಂಡಕ್ಕೆ ಗುರಿಯಾಗಿದ್ದಾರೆ. ಎಸಿ ತಬುಸಮ್ ಜಹೇರ ಶಿಕ್ಷೆಗೆ ಗುರಿಯಾದ ಅಪರಾಧಿಗೆ ನಾಲ್ಕು ವರ್ಷ ಜೈಲು 20 ಸಾವಿರ ದಂಡ ವಿಧಿಸಲಾಗಿದೆ.
ಮತ್ತೊಬ್ಬ ಆರೋಪಿ ಉಪ ತಹಶಿಲ್ದಾರ್ ಶಬ್ಬೀರ್ ಗೆ ನಾಲ್ಕು ವರ್ಷ ಜೈಲು 20 ಸಾವಿರ ರೂ ದಂಡ ವಿಧಿಸಲಾಗಿದೆ.
ತುಮಕೂರು 7ನೇ ಜಿಲ್ಲಾ ಮತ್ತು ಸತ್ರ ನ್ಯಾಲಯದಿಂದ ಜೈಲು ಶಿಕ್ಷೆ ಪ್ರಕಟಿಸಿದೆ. ಇವರು ತುಮಕೂರು ನಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಜಮೀನಿನ ಖಾತೆ ಮಾಡಿಕೊಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 23/05/2017 ತುಮಕೂರು ಭ್ರಷ್ಟಾಚಾರ ನಿಗ್ರಹದಳದಿಂದ ದಾಳಿ ನಡೆದಿತ್ತು.
ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ, ಅವರಗೆರೆ ಗ್ರಾಮದ ಜಯರಾಮ್.ವಿ ಎಂಬವರಿಂದ ಲಂಚ ಸ್ಚೀಕರಿಸುವ ವೇಳೆ ದಾಳಿ ನಡೆದಿತ್ತು. ಈ ಹಣವನ್ನು 1 ಎಕರೆ 7 ಕುಂಟೆ ಜಮೀನಿನ ಖಾತೆ ಮಾಡಿಕೊಡುವ ಸಲುವಾಗಿ ಲಂಚಕ್ಕೆ ಬೇಡಿ ಇಟ್ಟಿದ್ದರು ಎಂದು ತಿಳಿದಿದೆ.
ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ ಅವರಿಂದ ತೀರ್ಪು.ಈ ಹಿಂದೆ ತುಮಕೂರು ಎಸಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ನಡೆದಿದ್ದ ದಾಳಿಯಾಗಿದೆ.
[t4b-ticker]
+ There are no comments
Add yours