ಚಿತ್ರದುರ್ಗ:ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾ.ಪಂ. ಅಧ್ಯಕ್ಷ , ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಸುಧಾಕರ್ ಬೆಂಬಲಿಗರು ಗ್ರಾ.ಪಂ ಸದಸ್ಯರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಆಣೆ, ಪ್ರಮಾಣ ನಡೆದಿರುವ ಘಟನೆ ನಡೆದಿದೆ.
ಧರ್ಮಪುರ ಗ್ರಾ.ಪಂ ಸದಸ್ಯರು ಪ್ರಮಾಣ ಮಾಡಿದ ವಿಡಿಯೋ ವೈರಲ್ ಭಾರಿ ಸದ್ದು ಮಾಡುತ್ತಿದೆ.
ಧರ್ಮಸ್ಥಳದಲ್ಲಿ ಮಾಜಿ ಶಾಸಕ ಡಿ.ಸುಧಾಕರ್ ಸೂಚಿಸಿದವರಿಗೆ ಮತ ಹಾಕುವುದಾಗಿ ಪ್ರಮಾಣ ಮಾಡಿದ್ದಾರೆ.
ಸೆ.15ರಂದು ನಡೆದಿರುವ ಧರ್ಮಪುರ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯಲು ನಿಗದಿಯಾಗಿತ್ತು.ಅದರ ಹಿನ್ನಲೆಸೆ .14ರಂದು ಧರ್ಮಸ್ಥಳದಲ್ಲಿ ನಡೆದಿರುವ ಆಣೆ ಪ್ರಮಾಣ ವಿಡಿಯೋ ವೈರಲ್.
ಧರ್ಮಪುರ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬೆಂಬಲಿತರ ಪಾಲಾಗಿದೆ.
ಸೆ.15ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರ ಜಯ.
ಬಿಜೆಪಿ 10, ಕಾಂಗ್ರೆಸ್ 9, ಜೆಡಿಎಸ್ ಗೆ 3ಮತ ಪಡೆದಿದ್ದಾರೆ.
[t4b-ticker]
+ There are no comments
Add yours