ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೀತಿ ತೋರುವ ಅಭಿಮಾನಿಗಳಿದ್ದಾರೆ: ಡಿ.ಎಸ್.ಪ್ರದೀಪ್

 

ಹೊಸದುರ್ಗ : ಅನ್ನ ನೀಡುವ ರೈತ, ದೇಶ ಕಾಯುವ ಸೈನಿಕ, ದೇಶಕ್ಕಾಗಿ ಆಟವಾಡುವ ಕ್ರೀಡಾಪಟುಗಳನ್ನು ಅತ್ಯಂತ ಪ್ರೀತಿಯಿಂದ ಅಭಿಮಾನದಿಂದ ಕಾಣುವ ಅಭಿಮಾನಿಗಳು ಭಾರತದಲ್ಲಿದ್ದಾರೆಂದು ಸದ್ಗುರು ಆಯುರ್ವೇದ ಸಂಸ್ಥೆ  (Sadguru Ayurveda Institute)ಮಾಲೀಕ, ಉದ್ಯಮಿ ಡಿ.ಎಸ್.ಪ್ರದೀಪ್ ತಿಳಿಸಿದರು.

ನಗರದ ಪುರಸಭೆ ಮುಂಭಾಗದ ಗಣೇಶ ದೇವಸ್ಥಾನದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತದ ಗೆಲುವಿಗಾಗಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಭಾರತ ಕ್ರಿಕೆಟ್ ತಂಡದ ಆಟಗಾರರು ಅತ್ಯಂತ ಅನುಭವ ತರಬೇತಿದಾರ ರಾಹುಲ್ ದ್ರಾವಿಡ್ ರವರ ಗರಡಿಯಲ್ಲಿ ಪಳಗಿದ್ದು ಈ ಬಾರಿ ಕಪ್ ನಮ್ಮದೇ, ಎಂದರು.

ಇದನ್ನೂ ಓದಿ: ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

ಪುರಸಭಾ ಮಾಜಿ ಅಧ್ಯಕ್ಷ ಎಂ,ಶ್ರೀನಿವಾಸ್ ಪಾತನಾಡಿ ಭಾರತದ ಪ್ರಜೆಗಳಾದ ನಾವು ಎಂತಹ ಸಂದರ್ಭದಲ್ಲಿಯಾದರು ದೇಶದ ಪರವಾಗಿ ನಿಲ್ಲುವ ಬೆಳೆಸಿಕೊಳ್ಳಬೇಕು, ಕ್ರಿಕೆಟನ್ನು ಎಲ್ಲರೂ ಮನರಂಜನೆಗಾಗಿ ನೋಡಬೇಕು, ದೇಶಾಭಿಮಾನ ಬಳಸಿಕೊಳ್ಳುವ ಯುವ ಪೀಳಿಗೆ ಮುಂದೆ ಬಂದಾಗ ಯಾವುದೇ ಸಂದರ್ಭದಲ್ಲಿ ದೇಶ ಬಲಿಷ್ಠವಾಗಿ ನಿಲ್ಲಬಲ್ಲದು ಎಂದರು.
ನಗರದ ಪುರಸಭಾ ಸದಸ್ಯರು ನಾಗರಿಕರು ಭಾರತದ ಗೆಲುವಿಗಾಗಿ ಗಣೇಶ ದೇವಸ್ಥಾನದಲ್ಲಿ ಪೊಜೆ ಸಲ್ಲಿಸಿ ಪ್ರಾರ್ಥಿಸಿರುವುದು ಅತ್ಯಂತ ಸಂತೋಷದಾಯಕ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಟಿ ಎ ಪಿ ಎಂ ಎಸ್ ಅಧ್ಯಕ್ಷ ಕಾರೆಹಳ್ಳಿ ಬಸವರಾಜ್, ಪಿ ಐ ತಿಮ್ಮಪ್ಪ, ,ಪುರಸಭಾ ಮುಖ್ಯಧಿಕಾರಿ ತಿಮ್ಮರಾಜು,ಪುರಸಭಾ ಸದಸ್ಯರಾದ ದಾಳಿಂಬೆ ಗಿರೀಶ್, ಜಾಫರ್ ಸಾಧಿಕ್, ಡಾ. ಸ್ವಾತಿ ಪ್ರದೀಪ್, ಕೆ ಎಲ್ ನಾಗರಾಜ್, ರಾಮಚಂದ್ರಪ್ಪ, ಡಾ. ಸ್ವಾತಿ ಪ್ರದೀಪ್, ದೊಡ್ಡಯ್ಯ, ಮೇಘ ರಾಮಚಂದ್ರಪ್ಪ,ಮಂಜುನಾಥ್, ಮಾಜಿ ಪುರಸಭಾ ಸದಸ್ಯರಾದ ಮಂಜುನಾಥ್ ಕರೀಮ್ ಮುಲ್ಲಾ, ಮಾಚೇನಹಳ್ಳಿ ರಾಮ್ಕಿ,ತುಂಬಿನಕೆರೆ ಬಸವರಾಜ್, ಹಾಗೂ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.

[t4b-ticker]

You May Also Like

More From Author

+ There are no comments

Add yours