ಶಿವಮೊಗ್ಗ: ಹಕ್ಕು ಬದಲಾವಣೆಗೆ ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ಹಕ್ಕು ದಾಖಲೆ ಶಾಖೆಯ ಶಿರಸ್ತೇದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷನಾಗಿರುವ ಅರುಣ್ ಕುಮಾರ್ ಲೋಕಾಯುಕ್ತರಿಗೆ ಸಾಕ್ಷಿ ಸಹಿತ ಸಿಕ್ಕಿ ಬಿದ್ದಿದ್ದಾರೆ.
ಖಾತೆ ಬದಲಾವಣೆಗೆ ಮೂರು ಲಕ್ಷ ರೂ. ಡಿಮಾಂಡ್ ಮಾಡಿದ್ದರು. ಒಂದೂವರೆ ಲಕ್ಷ ರೂ. ಪಡೆಯುವ ವೇಳೆ ಹಣದ ಸಮೇತ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್, ಶಿಲ್ಪಾ, ರಾಮಕೃಷ್ಣ ದಾಳಿಯಲ್ಲಿ ಭಾಗಿಯಾಗಿದ್ದರು.
[t4b-ticker]
+ There are no comments
Add yours