ಸಂಜೀವಿನಿ ಆಂಬುಲೆನ್ಸ್ ಸೇವೆ ಆರಂಭ
ಚಿತ್ರದುರ್ಗ:ಅಪಘಾತಕ್ಕೊಳದಾವರ ತಕ್ಷಣದ ನೆರವಿಗೆ ಧಾವಿಸುವ ಉದ್ದೇಶದಿಂದ ಸಂಜೀವಿನಿ ಸದಸ್ಯರಿಂದ ಸಿದ್ದಪಡಿಸಲಾದ ನೂತನ ಸಂಜೀವಿನಿ ಆಂಬುಲೆನ್ಸ್ ನ್ನು ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದರು.
ಬೆಂಗಳೂರು ನಗರದ ಬಿಗ್ ಬಾಸ್ ಮನೆಯ ಬಳಿ ಶುಕ್ರವಾರ ರಸ್ತೆ ಅಪಘಾತ ತಡೆ ಜಾಗೃತಿ ಹಾಗೂ ಗಾಯಾಳುಗಳಿಗೆ ನೆರವು ನೀಡುತ್ತಿರುವ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ಅಪಘಾತಕ್ಕೊಳದಾವರ ತಕ್ಷಣದ ನೆರವಿಗೆ ಧಾವಿಸುವ ಉದ್ದೇಶದಿಂದ ಸಿದ್ದಪಡಿಸಲಾದ ಸಂಜೀವಿನಿ ಆಂಬುಲೆನ್ಸ್ ಬಿಡುಗಡೆಗೊಳಿಸಿ ಮಾತನಾಡಿದ ಕಿಚ್ಚ ಸುದೀಪ್, ರಸ್ತೆ ಅಪಘಾತ ಕ್ಕೊಳಗಾದವರಿಗೆ ನೆರವು ಸಿಗುವುದರೊಂದಿಗೆ ಕಷ್ಟದಲ್ಲಿದ್ದವರಿಗೆ ಸಹಾಯದ ಹಸ್ತ ಚಾಚಿದಂತಾಗುತ್ತದೆ ಎಂದು ಟ್ರಸ್ಟ್ ನ ಕಾರ್ಯಗಳನ್ನು ಶ್ಲಾಘಿಸಿದರು.
ರಸ್ತೆ ಅಪಘಾತಕ್ಕೊಳಗಾದ ಸಾವಿರಾರು ಜನರನ್ನು ರಕ್ಷಣೆ ಮಾಡಿ ಜೀವ ಉಳಿಸಿರುವುದನ್ನು ಕೇಳಿ ತುಂಬಾ ಸಂತೋಷವಾಗಿದೆ ಸಮಾಜದಲ್ಲಿ ಕಷ್ಟಕ್ಕೊಳ್ಳಗಾದವರಿಗೆ ಎಲ್ಲರೂ ಸಹಾಯ ಹಸ್ತ ಚಾಚುವುದು ತುಂಬಾ ಅವಶ್ಯಕ. ನಾನು ಸಹಾ ಸಂಜೀವಿನಿ ಟ್ರಸ್ಟಿಗೆ ಸಾಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಜೀವಿನಿ ಟ್ರಸ್ಟ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೌಮ್ಯ ಮಂಜುನಾಥ ಸ್ವಾಮಿ ಮಾತನಾಡಿ ಜನಪ್ರಿಯ ನಟ ಕಿಚ್ಚ ಸುದೀಪ್ ಮೂಲಕ ಆಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿರುವುದು ಟ್ರಸ್ಟ್ನ ಸದಸ್ಯರಿಗೆ ಸಂತೋಷ ತಂದಿದೆ ಮುಂದಿನ ದಿನಗಳಲ್ಲಿ ಅಪಾಯದಲ್ಲಿ ಇದ್ದವರಿಗೆ ನೆರವು ನೀಡುವುದರೊಂದಿಗೆ ಜೀವಗಳನ್ನು ರಕ್ಷಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಜನವರಿ 21 ರಂದು ವಿದ್ಯುತ್ ವ್ಯತ್ಯಯ
ಈ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ರಂಗಸ್ವಾಮಿ ಇಂಗಳದಾಳ್, ಶಶಿಧರ ಸಿ ಬತ್ತೈನಟ್ಟಿ, ಚೇತನ್ ಭಗತ್, ಮಾಂತೇಶ ಆರ್, ಪ್ರೇಮ್ ಕುಮಾರ್ ಯರ್ರಿ ಸ್ವಾಮಿ, ಆಂಬುಲೆನ್ಸ್ ನ ಡ್ರೈವರ್ ಆದ ರಾಜಣ್ಣ ಕೆನ್ನೆಡಲು ಹಾಗೂ ಚಲನಚಿತ್ರ ನಟರಾದ ಚಂದ್ರಚೂಡು, ಸುದೀಪ್ ಸಂಘದ ಅಧ್ಯಕ್ಷ ನವೀನ್ ಗೌಡ, ಜಗದೀಶ್ ಜಗ್ಗಿ ಇನ್ನು ಮುಂತಾದವರು ಇದ್ದರು.
[t4b-ticker]
+ There are no comments
Add yours