ಆಗಸ್ಟ್ 11 ರಂದು ಐದು ಸಾವಿರ ಬೈಕ್ ಗಳ ರ್ಯಾಲಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

ಚಿತ್ರದುರ್ಗ:ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಗರದಲ್ಲಿ  ಐದು ಸಾವಿರ ಬೈಕ್ ಗಳ  ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾನಡಿ ಆಗಸ್ಟ್  11 ತಾರೀಖು  ಗುರುವಾರ ಚಂದ್ರವಳ್ಳಿ ಬಳಿಯ  SJM ಕಾಲೇಜು ಬಳಿಯಿಂದ  5 ಸಾವಿರ ಮೋಟರ್ ಬೈಕ್ ರ್ಯಾಲಿ ಆರಂಭವಾಗಿ ನಗರದ ಎಲ್ಲಾ ಪ್ರಮುಖ‌ ರಸ್ತೆಗಳಲ್ಲಿ  ಸ್ವಾತಂತ್ರ್ಯವ ಸಂದೇಶ ಸಾರಲಾಗುತ್ತದೆ. ಈ‌ ಬೈಕ್  ರ್ಯಾಲಿಯಲ್ಲಿ
ಎಲ್ಲಾರೂ ಪಕ್ಷತೀತಾವಾಗಿ ಮಾಡಲಾಗುತ್ತದೆ. ಯವುದೇ  ಪಕ್ಷದ  ಭಾವುಟ ಕಟ್ಟದೆ ಭಾರತ ದೇಶದ ಧ್ವಜವನ್ನು ಕಟ್ಟಿಕೊಂಡು ಬೈಕ್ ಗಳು ಭಾಗವಹಿಸುತ್ತವೆ. ಅಧಿಕಾರಿಗಳು ಸೇರಿ ಎಲ್ಲಾರೂ ಭಾಗವಹಿಸಬಹುದು ಎಂದರು.
 ಆಗಸ್ಟ್  13 ರಿಂದ 15 ತಾರೀಖಿನಂದು ಹರ್ ಘರ್ ತಿರಂಗ್ ಅಡಿಯಲ್ಲಿ ಎಲ್ಲಾ  ಮನೆಯ ಮೇಲೆ ನಮ್ಮ ದೇಶದ ಧ್ವಜವನ್ನು ಕಟ್ಟಿಕೊಳ್ಳುವ ಮೂಲಕ ರಾಷ್ಟ್ರೀಯ ಅಭಿಮಾನ‌ ಮೂಡಿಸುವ ಮತ್ತು ಗೌರವ ಸಲ್ಲಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು. ಜಿಲ್ಲಾಧ್ಯಕ್ಷ ಎ.ಮುರುಳಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಜಿ.ಟಿ.ಸುರೇಶ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ ಯಾದವ್, ನಗರಸಭೆ ಸದಸ್ಯ ಸುರೇಶ್, ಬಿಜೆಪಿ ನಗರ ಅಧ್ಯಕ್ಷ ಚಾಲುಕ್ಯ ನವೀನ್, ಗ್ರಾಮಂತರ ಅಧ್ಯಕ್ಷ ನಂದಿನಾಗರಾಜ್ ಮುಖಂಡರಾದ  ಸಂಪತ್ ಕುಮಾರ್, ಮಾಧುರಿ ಗಿರೀಶ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇಂದ್ರೆ  ಇದ್ದರು.
[t4b-ticker]

You May Also Like

More From Author

+ There are no comments

Add yours