ಚಳ್ಳಕೆರೆ ಜೆಡಿಎಸ್ ಗೆ ನೂತನ ಅಧ್ಯಕ್ಷರಾಗಿ ಪಿ.ತಿಪ್ಪೇಸ್ವಾಮಿ ನೇಮಕ

 

ಚಳ್ಳಕೆರೆ🙁challakere) ಜಾತ್ಯಾತೀತ ಜನತಾದಳದ ಜನಪ್ರಿಯತೆ ರಾಷ್ಟೀಯ ಪಕ್ಷದ ನಾಯಕರಿಗೂ ಸವಾಲಾಗಿ ಪರಿಣಮಿಸಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮವಹಿಸಿ ಚುನಾವಣಾ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದೆ ಗೆಲುವು ನಮಗೆ ಸುಲಭವಾಗಿ ಒಲಿಯುತ್ತದೆ ಎಂದು ಜೆಡಿಎಸ್ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಪಿ.ತಿಪ್ಪೇಸ್ವಾಮಿ ತಿಳಿಸಿದರು.

ಅವರು, ಪ್ರವಾಸಿಮಂದಿರದಲ್ಲಿ ಪಕ್ಷದ ಸಂಘಟನಾತ್ಮಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇದೇ ಸಂದರ್ಭದಲ್ಲಿ ಪಕ್ಷದ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಪಿ.ತಿಪ್ಪೇಸ್ವಾಮಿಯವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರ ಒಕ್ಕೊರಲಿನ ಅಭಿಪ್ರಾಯದಂತೆ ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆ ಮಾಡಲಾಯಿತು. ಕಾರ್ಯಕರ್ತರು,ಮುಖಂಡರ ಪ್ರೀತಿ, ವಿಶ್ವಾಸ, ಗೌರವಕಂಡು ನನಗೆ ಹೆಚ್ಚು ಸಂತೋಷವಾಗಿದೆ. ನೀವೆಲ್ಲರೂ ಸಹಕಾರ ನೀಡಿದರೆ ಲೋಕಸಭೆಯೂ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ ಗೆಲುವು ನಮ್ಮದಾಗುತ್ತದೆ ಎಂದರು.

ಇದನ್ನೂ ಓದಿ: ಮಾ.06 ರಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನೆ
ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ನಗರಂಗೆರೆ ಸಣ್ಣಬೋರಣ್ಣ, ಕಲಮರಹಳ್ಳಿಶಿವಣ್ಣ, ಹೆಗ್ಗೆರೆ ಆನಂದಪ್ಪ, ಹುಲಿಕುಂಟೆ  ವೀರೇಂದ್ರಪ್ಪ, ಬೆಳಗೆರೆಚಂದ್ರಣ್ಣ, ಉದಯಕುಮಾರ್, ರಾಮಣ್ಣ, ಸುನೀಲ್, ದೇವರಾಜಣ್ಣ, ನಗರಸಭಾ ಸದಸ್ಯರಾದ ಸಿ.ಶ್ರೀನಿವಾಸ್, ವಿ.ವೈ.ಪ್ರಮೋದ್, ಕವಿತಾನಾಯಕಿ, ನಾಗಮಣಿ, ನಿರ್ಮಲ, ತಿಪ್ಪಮ್ಮ, ವಿಶುಕುಮಾರ್, ಬಹೀರ್‌ಹಯಾತ್, ಜೆ.ಮಂಜುನಾಥ, ಕುಲುಮೆಭಾಷ ಮುಂತಾದವರು ಉಪಸ್ಥಿತರಿದ್ದರು.

 

[t4b-ticker]

You May Also Like

More From Author

+ There are no comments

Add yours